ಬೀದರ್: ವಿದ್ಯಾರ್ಥಿಗಳು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಇರುವ ಸೇವೆಗಳ ಸದುಪಯೋಗ ಪಡೆಯಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಚಾರ್ಯ ಪ್ರೊ. ರಾಜಪ್ಪ ಬಬಚೇಡಿ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆದ ಸಕಾಲ ಸಪ್ತಾಹ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಕಾಲ ಯೋಜನೆ ಕುರಿತು ಸಕಾಲ ಸಮಿತಿಯ ಸಂಯೋಜಕ ಡಾ. ಭೀಮಷಾ ಕೆ.ಬಿ. ಮಾಹಿತಿ ನೀಡಿದರು.
ಡಾ. ವಿದ್ಯಾ ಪಾಟೀಲ, ಪ್ರೊ. ಸುಂದರರಾಜು ಎಸ್, ಡಾ. ಉಮಾಕಾಂತ ಗಣಪತಿ, ಪ್ರೊ. ಸಂಜೀವಕುಮಾರ ಅಪ್ಪೆ, ಗ್ರಂಥಪಾಲಕಿ ಪಾರ್ವತಿ ಮೇತ್ರೆ, ಸಂಜೀವಕುಮಾರ ಪಾಟೀಲ, ಜಗದೇವಿ, ಸುನೀತಾ, ಶಾಹೀನ್, ಸತೀಶಕುಮಾರ, ಹರ್ಷಾ ಇದ್ದರು. ಸುಂದರರಾಜು ನಿರೂಪಿಸಿದರು. ಉಮಾಕಾಂತ ಗಣಪತಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.