ADVERTISEMENT

ಕೊರೊನಾ ಹೋಗಲಾಡಿಸಲು ಸಹಕರಿಸಿ: ಪ್ರಭು ಚವಾಣ್ ಮನವಿ

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಮನವಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2021, 2:33 IST
Last Updated 4 ಜೂನ್ 2021, 2:33 IST
ಕಮಲನಗರ ಗ್ರಾಮ ಪಂಚಾಯಿತಿಗೆ ಗುರುವಾರ ಭೇಟಿ ನೀಡಿದ ಸಚಿವ ಪ್ರಭು ಚವಾಣ್ ಅವರು ಆರೋಗ್ಯ ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರೊಂದಿಗೆ ಚರ್ಚಿಸಿ, ಮಾಹಿತಿ ಪಡೆದುಕೊಂಡರು
ಕಮಲನಗರ ಗ್ರಾಮ ಪಂಚಾಯಿತಿಗೆ ಗುರುವಾರ ಭೇಟಿ ನೀಡಿದ ಸಚಿವ ಪ್ರಭು ಚವಾಣ್ ಅವರು ಆರೋಗ್ಯ ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರೊಂದಿಗೆ ಚರ್ಚಿಸಿ, ಮಾಹಿತಿ ಪಡೆದುಕೊಂಡರು   

ಕಮಲನಗರ: ಗಡಿ ಜಿಲ್ಲೆ ಬೀದರ್‌ನಲ್ಲಿ ಕಳೆದ ತಿಂಗಳಿಗೆ ಹೋಲಿಕೆ ಮಾಡಿದರೆ ಕೊರೊನಾ ಅಬ್ಬರ ತಕ್ಕಮಟ್ಟಿಗೆ ಕಡಿಮೆಯಾಗಿದೆ. ಮರಣದ ಪ್ರಮಾಣವೂ ಇಳಿಕೆಯಾಗಿದೆ. ಹೀಗಂತ ಯಾರು ಮೈಮರೆಯದೇ ಕೋವಿಡ್ ಮಾರ್ಗಸೂಚಿ ಪಾಲಿಸಿ, ಸಹಕರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಹೇಳಿದರು.

ಕೋವಿಡ್ ಪರಿಶೀಲನೆ ಮತ್ತು ಜಾಗೃತಿ ನಿಮಿತ್ತ ಇಲ್ಲಿನ ಗ್ರಾಮ ಪಂಚಾ ಯಿತಿಗೆ ಗುರುವಾರ ಭೇಟಿ ನೀಡಿದ ಅವರು, ‘ಪ್ರತಿ ಗ್ರಾಮದಲ್ಲೂ ಪಿಡಿಒ ನೇತೃತ್ವದಲ್ಲಿ ಆರೋಗ್ಯಾಧಿಕಾರಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು’ ಎಂದರು.

ಜಿಪಂ ಸಿಇಒ ಜಹೀರಾ ನಸೀಮ್, ತಹಶೀಲ್ದಾರ್ ರಮೇಶ ಪೆದ್ದೆ, ತಾ.ಪಂ ಇಒ ಮಾಣಿಕರಾವ ಪಾಟೀಲ, ಡಿವೈಎಸ್‍ಪಿ ಡಾ.ದೇವರಾಜ, ಟಿಎಚ್‍ಒ ಶರಣಯ್ಯ ಸ್ವಾಮಿ, ತಾ.ಪಂ ಅಧ್ಯಕ್ಷ ಗಿರೀಶ ಒಡೆಯರ್, ಗ್ರಾ.ಪಂ ಅಧ್ಯಕ್ಷ ಶಿವಕುಮಾರ ಜುಲ್ಪೆ, ಮುಖಂಡ ಬಂಡೆಪ್ಪಾ ಕಂಟೆ, ರಾಮಶೆಟ್ಟಿ ಪನ್ನಾಳೆ, ಅರಹಂತ ಸಾವಳೆ, ಸುರೇಶ ಭೋಸ್ಲೆ, ಶಿವಾನಂದ ವಡ್ಡೆ, ಬಾಲಾಜಿ ತೇಲಂಗ್, ಪಿಡಿಒ ರಾಜಕುಮಾರ ತಂಬಾಕೆ, ದಿಲೀಪ ಚವಾಣ್, ಪ್ರಶಾಂತ ಜಾಧವ, ಸುರೇಶ ಭೋಸ್ಲೆ, ಸತೀಶ ಪಾಟೀಲ ಇದ್ದರು.

ADVERTISEMENT

ತಾಲೂಕಿನ ಚಿಕ್ಲಿ (ಯು), ಗಂಗನಬೀಡ, ಚಿಮ್ಮೇಗಾಂವ, ದಾಬಕಾ, ಮುರ್ಕಿ, ಮದನೂರ, ಡೋಣಗಾಂವ್, ಸೋನಾಳ, ಖೇಡ, ಹೊಳಸಮುದ್ರ, ಡಿಗ್ಗಿ ಗ್ರಾಮಗಳಿಗೆ ಭೇಟಿ ನೀಡಿದ ಸಚಿವರು ಕೋವಿಡ್ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.