ADVERTISEMENT

ಠಾಣಾಕುಶನೂರು: ಘಟ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 12:31 IST
Last Updated 27 ಸೆಪ್ಟೆಂಬರ್ 2022, 12:31 IST
ಕಮಲನಗರ ತಾಲ್ಲೂಕಿನ ಠಾಣಾಕುಶನೂರಿನ ಭವಾನಿ ಮಂದಿರದಲ್ಲಿ ಭವಾನಿ ಮಾತೆ ಪೂಜೆ ಮತ್ತು ಘಟ ಸ್ಥಾಪನೆ ಕಾರ್ಯಕ್ರಮ ನಡೆಯಿತು
ಕಮಲನಗರ ತಾಲ್ಲೂಕಿನ ಠಾಣಾಕುಶನೂರಿನ ಭವಾನಿ ಮಂದಿರದಲ್ಲಿ ಭವಾನಿ ಮಾತೆ ಪೂಜೆ ಮತ್ತು ಘಟ ಸ್ಥಾಪನೆ ಕಾರ್ಯಕ್ರಮ ನಡೆಯಿತು   

ಕಮಲನಗರ: ತಾಲ್ಲೂಕಿನ ಠಾಣಾಕುಶನೂರು ಗ್ರಾಮದ ಭವಾನಿ ಮಂದಿರದಲ್ಲಿ ಘಟ ಸ್ಥಾಪನೆ ಮಾಡಲಾಯಿತು. ಭವಾನಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಬೆಳಿಗ್ಗೆ ಮಾಣಿಕರಾವ ಬಾಳೂರೆ ದಂಪತಿ ಭವಾನಿ ಮಾತೆಗೆ ಅಭಿಷೇಕ ಮಾಡಿಸಿದರು. ಹಸಿರು ಬಳೆ ಮತ್ತು ಸೀರೆ ತೊಡಿಸಲಾಯಿತು. ಅರಿಶಿಣ ಮತ್ತು ಕುಂಕುಮ ಧಾರಣೆ ಮಾಡಿ ಮೂರ್ತಿಗೆ ಪೂಜೆ ಸಲ್ಲಿಸಲಾಯಿತು.

ಧನರಾಜ ನಾಗಪ್ಪ ಒಡೆಯರ್ ಅವರು ಘಟ ಸ್ಥಾಪನೆ ಕಾರ್ಯ ನೆರವೇರಿಸಿದರು.

ADVERTISEMENT

ಉಮಾಕಾಂತ ಬಿರಾದಾರ, ರಘುನಾಥ ರೊಟ್ಟೆ, ಗಾಯಬಣ್ಣಾ ಪವಾರ, ಗಿರೀಶ ಒಡೆಯರ್, ಬಾಬುರಾವ ಬಿರಾದಾರ, ಮಲ್ಲಿಕಾರ್ಜುನ ಬಿರಾದಾರ, ಮಹೇಶ ಒಡೆಯರ್, ಹರೀಶ ಒಡೆಯರ್, ಕಿರಣ ಒಡೆಯರ್, ಬಾಬುರಾವ ವಾಘಮೋಡೆ, ಮಕ್ಕಳು ಹಾಗೂ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.