ADVERTISEMENT

ಕಮಲನಗರ | ಮೊಬೈಲ್‌ ಬಳಸದಂತೆ ಹೇಳಿದ್ದಕ್ಕೆ ಬಾಲಕಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2025, 6:01 IST
Last Updated 27 ಮಾರ್ಚ್ 2025, 6:01 IST
<div class="paragraphs"><p>ಸೋನಿ ಸಂತೋಷ ಬನವಾಸೆ</p></div>

ಸೋನಿ ಸಂತೋಷ ಬನವಾಸೆ

   

ಕಮಲನಗರ (ಬೀದರ್‌ ಜಿಲ್ಲೆ): ಮೊಬೈಲ್‌ ಹೆಚ್ಚು ಬಳಸಬಾರದು ಎಂದು ತಂದೆ ಹೇಳಿದ್ದಕ್ಕೆ ಮನನೊಂದ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲ್ಲೂಕಿನ ಡಿಗ್ಗಿ ಗ್ರಾಮದಲ್ಲಿ ನಡೆದಿದೆ.

ಸೋನಿ ಸಂತೋಷ ಬನವಾಸೆ (15) ಮೃತ ಬಾಲಕಿ. ಬುಧವಾರ ಘಟನೆ ನಡೆದಿದೆ.

ADVERTISEMENT

‘ಮೊಬೈಲ್‌ನಲ್ಲಿ ಹೆಚ್ಚಿನ ಸಮಯ ಕಾಲಾಹರಣ ಮಾಡಬಾರದು’ ಎಂದು ಸಂತೋಷ ಅವರು ಮಗಳಿಗೆ ಬುದ್ಧಿಮಾತು ಹೇಳಿದ್ದಾರೆ. ಇದರಿಂದ ಮನನೊಂದ ಸೋನಿ ನೇಣು ಹಾಕಿಕೊಂಡು ಜೀವ ತ್ಯಜಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಕಮಲನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.