ADVERTISEMENT

ಬಸವಕಲ್ಯಾಣ: ತಾಲ್ಲೂಕಿನಲ್ಲಿ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2020, 13:09 IST
Last Updated 10 ಜೂನ್ 2020, 13:09 IST
ಬಸವಕಲ್ಯಾಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರಿನ ರಸ್ತೆ ಪಕ್ಕದಲ್ಲಿ ಬುಧವಾರ ಸಂಗ್ರಹಗೊಂಡ ಮಳೆ ನೀರಿನಲ್ಲಿ ಉರುಳಿಬಿದ್ದಿರುವ ದ್ವಿಚಕ್ರ ವಾಹನವನ್ನು ಮೇಲಕ್ಕೆ ಎತ್ತುತ್ತಿರುವ ಸವಾರರು
ಬಸವಕಲ್ಯಾಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರಿನ ರಸ್ತೆ ಪಕ್ಕದಲ್ಲಿ ಬುಧವಾರ ಸಂಗ್ರಹಗೊಂಡ ಮಳೆ ನೀರಿನಲ್ಲಿ ಉರುಳಿಬಿದ್ದಿರುವ ದ್ವಿಚಕ್ರ ವಾಹನವನ್ನು ಮೇಲಕ್ಕೆ ಎತ್ತುತ್ತಿರುವ ಸವಾರರು   

ಬಸವಕಲ್ಯಾಣ: ಪಟ್ಟಣ ಹಾಗೂ ತಾಲ್ಲೂಕಿನ ವಿವಿಧೆಡೆ ಬುಧವಾರ ಉತ್ತಮ ಮಳೆ ಸುರಿಯಿತು. ಬಿಸಿಲಿನ ದಗೆ ಕಡಿಮೆಯಾಗಿ ತಂಪು ವಾತಾವರಣ ನಿರ್ಮಾಣವಾಯಿತು. ಪಟ್ಟಣದ ರಸ್ತೆಗಳಲ್ಲಿ ನೀರು ಹರಿಯಿತು. ಚರಂಡಿಗಳು ತುಂಬಿದ್ದರಿಂದ ಕೆಲಕಾಲ ರಸ್ತೆಗಳಲ್ಲಿ ನೀರು ಸಂಗ್ರಹಗೊಂಡು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು.

ಕೆಲ ದಿನಗಳ ಹಿಂದೆ ತಾಲ್ಲೂಕಿನ ಅಲ್ಲಲ್ಲಿ ಮಳೆ ಅಗಿತ್ತು. ತಾಲ್ಲೂಕಿನ ಕೆಲ ಭಾಗಗಳಲ್ಲಿ ಈಗಾಗಲೇ ಬಿತ್ತನೆ ಆರಂಭಿಸಲಾಗಿತ್ತು. ಭೂಮಿ ಹಸಿಯಾಗಿದ್ದು, ಗುರುವಾರದಿಂದ ಎಲ್ಲ ಕಡೆ ಬಿತ್ತನೆ ಆರಂಭವಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT