ಬಸವಕಲ್ಯಾಣ: ಸಮೀಪದ ಹುಲಸೂರಿನಲ್ಲಿ ಭಾನುವಾರ ಅಂಗನ ವಾಡಿ ಆಹಾರ ಧಾನ್ಯದ ಚೀಲಗಳನ್ನು ಸ್ಮಶಾನದಲ್ಲಿ ಇಳಿಸಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು ಎಂಬ ದೂರಿನ ಮೇರೆಗೆ ಆಹಾರ ಧಾನ್ಯದ ಚೀಲಗಳಿರುವ ಎರಡು ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಗ್ರಾಮ ಪಂಚಾಯಿತಿ ಸದಸ್ಯ ಗುಲಾಮ್ ಬಡಾಯಿ ಅವರ ದೂರಿನ ಮೇರೆಗೆ ವಾಹನಗಳ ಜಪ್ತಿ ನಡೆದಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಗುಲಾಮ್ ಬಡಾಯಿ ಅವರು,‘ಆಹಾರ ಧಾನ್ಯ ಇಳಿಸುತ್ತಿದ್ದ ವೇಳೆ ಸ್ಥಳಕ್ಕೆ ಹೋದಾಗ ವಾಹನ ಕೆಟ್ಟಿದ್ದರಿಂದ ಆಹಾರ ಧಾನ್ಯ ಇಲ್ಲಿ ಇಳಿಸುತ್ತಿದ್ದೇವೆ ಎಂಬ ಸಬೂಬು ಹೇಳಲಾಗಿದೆ. ಆದರೆ, ಪ್ರತಿ ತಿಂಗಳು ಅಂಗನವಾಡಿಗಳಿಗೆ ಆಹಾರ ಧಾನ್ಯ ತೆಗೆದುಕೊಂಡು ಹೋಗದೆ ಇಲ್ಲಿಯೇ ಇಳಿಸಲಾಗುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.