ADVERTISEMENT

ಇಂದಿರಾ ಕ್ಯಾಂಟೀನ್ ಊಟ ಸವಿದ ಶಾಸಕ

ಕೂಲಿಕಾರ್ಮಿಕರು, ವಲಸಿಗರು, ದುರ್ಬಲ ವರ್ಗದವರಿಗೆ ಉಚಿತ ಆಹಾರ

​ಪ್ರಜಾವಾಣಿ ವಾರ್ತೆ
Published 13 ಮೇ 2021, 2:33 IST
Last Updated 13 ಮೇ 2021, 2:33 IST
ಬಸವಕಲ್ಯಾಣದ ಇಂದಿರಾ ಕ್ಯಾಂಟಟೀನ್‌ನಲ್ಲಿ ಶಾಸಕ ಶರಣು ಸಲಗರ ಬುಧವಾರ ಊಟ ಸವಿದರು
ಬಸವಕಲ್ಯಾಣದ ಇಂದಿರಾ ಕ್ಯಾಂಟಟೀನ್‌ನಲ್ಲಿ ಶಾಸಕ ಶರಣು ಸಲಗರ ಬುಧವಾರ ಊಟ ಸವಿದರು   

ಬಸವಕಲ್ಯಾಣ: ಶಾಸಕ ಶರಣು ಸಲಗರ ಅವರು ಬುಧವಾರ ನಗರದ ನಾರಾಯಣಪುರ ರಸ್ತೆಯಲ್ಲಿನ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಸವಿದರು.

ಸರ್ಕಾರ ಲಾಕ್‌ಡೌನ್‌ ಇರುವ ಕಾರಣ ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತ ಊಟ ನೀಡಲಾಗುವುದು ಎಂದು ಪ್ರಕಟಿಸಿದ ಕಾರಣ ಶಾಸಕರು ಊಟ ಬಡಿಸಿ ಉಚಿತ ವ್ಯವಸ್ಥೆಗೆ ಚಾಲನೆ ನೀಡಿ ತಾವೂ ಊಟ ಮಾಡಿದರು.

ಬೆಳಿಗ್ಗೆಯ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿಯ ಊಟ ನೀಡಲಾಗುತ್ತದೆ. ಕೂಲಿ ಕಾರ್ಮಿಕರು, ವಲಸಿಗರು ಹಾಗೂ ದುರ್ಬಲ ವರ್ಗದವರು ಇದರ ಲಾಭ ಪಡೆದು ಕೊಳ್ಳಬೇಕು ಎಂದು ಸಲಹೆ ನೀಡಿದರು.

ADVERTISEMENT

ನಗರಸಭೆ ಅಧ್ಯಕ್ಷೆ ನಾಹೀದಾ ಸುಲ್ತಾನಾ, ಪೌರಾಯುಕ್ತ ಗೌತಮಬುದ್ಧ ಕಾಂಬಳೆ, ಬಿಜೆಪಿ ನಗರ ಘಟಕದ ಅಧ್ಯಕ್ಷ ಕೃಷ್ಣಾ ಗೋಣೆ ಉಪಸ್ಥಿತರಿದ್ದರು.

1700 ಜನರಿಗೆ ಊಟ

ಬೀದರ್: ನಗರದಲ್ಲಿ ಮೂರು ಇಂದಿರಾ ಕ್ಯಾಂಟೀನ್‌ಗಳಿವೆ.

‘ನಗರಸಭೆ ಕಚೇರಿ, ಜಿಲ್ಲಾ ಆಸ್ಪತ್ರೆ ಮತ್ತು ಗಾಂಧಿ ಗಂಜ್‌ ಬಳಿಯಿರುವ ಇಂದಿರಾ ಕ್ಯಾಂಟೀನ್‌ಗಳಿಂದ ಮಂಗಳವಾರ ಒಟ್ಟು 800 ಮತ್ತು ಬುಧವಾರ ಒಟ್ಟು 900 ಮಂದಿಗೆ ಉಚಿತ ಉಪಾಹಾರ ಮತ್ತು ಊಟ ನೀಡಲಾಯಿತು’ ಎಂದು ಇಂದಿರಾ ಕ್ಯಾಂಟೀನ್ ವ್ಯವಸ್ಥಾಪಕ ಜಟಿಂಗ್ ಮಾಹಿತಿ ನೀಡಿದ್ದಾರೆ.

1300 ಜನರಿಗೆ ಆಹಾರ

ಭಾಲ್ಕಿ: ‘ಇಲ್ಲಿಯ ಇಂದಿರಾ ಕ್ಯಾಂಟೀನ್‌ನಲ್ಲಿ ಮಂಗಳವಾರ ಉಪಾಹಾರ, ಊಟ ಸೇರಿ ಸುಮಾರು 700 ಜನರಿಗೆ ಹಾಗೂ ಬುಧವಾರ 600 ಜನರಿಗೆ ಉಚಿತವಾಗಿ ನೀಡಲಾಗಿದೆ’ ಎಂದು ಕ್ಯಾಂಟೀನ್‌ ಮೇಲ್ವಿಚಾರಕ ಬಿಂದುಸಾರ ಶಿವಪೂರೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.