ADVERTISEMENT

ಕಮಲನಗರ:ಎಳ್ಳಮಾವಾಸ್ಯೆ ಬಲು ಜೋರು

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2019, 11:17 IST
Last Updated 26 ಡಿಸೆಂಬರ್ 2019, 11:17 IST
ಕಮಲನಗರ ತಾಲ್ಲೂಕಿನ ಡಿಗ್ಗಿ ಗ್ರಾಮದ ಸಂತೋಷ ಬನವಾಸೆ ಅವರ ಹೊಲದಲ್ಲಿ ಎಳ್ಳಮಾವಾಸ್ಯೆ ಹಬ್ಬದ ಅಂಗವಾಗಿ ಪಂಕ್ತಿಯಲ್ಲಿ ಕುಳಿತು ಊಟ ಮಾಡಿದರು
ಕಮಲನಗರ ತಾಲ್ಲೂಕಿನ ಡಿಗ್ಗಿ ಗ್ರಾಮದ ಸಂತೋಷ ಬನವಾಸೆ ಅವರ ಹೊಲದಲ್ಲಿ ಎಳ್ಳಮಾವಾಸ್ಯೆ ಹಬ್ಬದ ಅಂಗವಾಗಿ ಪಂಕ್ತಿಯಲ್ಲಿ ಕುಳಿತು ಊಟ ಮಾಡಿದರು   

ಕಮಲನಗರ : ತಾಲ್ಲೂಕಿನಾದ್ಯಂತ ರೈತರು ಸಂಭ್ರಮದಿಂದ ಎಳ್ಳ ಅಮವಾಸ್ಯೆ ಹಬ್ಬವನ್ನು ಆಚರಿಸಿದರು.

ಕಳೆದ ಸಾಲಿನಲ್ಲಿ ಎಳ್ಳಮಾವಾಸ್ಯೆ ಹಬ್ಬ ಆಚರಿಸಲಾಗಿತ್ತು. ಈ ವರ್ಷ ಡಿಸೆಂಬರ್ ತಿಂಗಳನಲ್ಲಿಯೇ ವಿಶೇಷವಾಗಿ ದಿಸೆಂಬರ್ 25 ಕ್ರಿಸ್‌ಮಸ್‌ ಹಬ್ಬದಂದೇ ಬಂದಿದು ವಿಶೇಷವಾಗಿತ್ತು.

ಹಬ್ಬದ ನಿಮಿತ್ತ ತಾಲ್ಲೂಕಿನ ಪ್ರತಿಯೊಂದು ಗ್ರಾಮದ ರೈತರು ತಮ್ಮ ಹೊಲಗಳಿಗೆ ಬುತ್ತಿ ತೆಗೆದುಕೊಂಡು ದೇವರಿಗೆ,ಭೂತಾಯಿಗೆ ನೈವೇದ್ಯ ಅರ್ಪಿಸಿ ಭೋಜನ ಮಾಡುವು ದರೊಂದಿಗೆ ಹಬ್ಬದ ಸಂಭ್ರಮ ಆಚರಿಸಿದರು.

ADVERTISEMENT

ಗೆಳೆಯರು, ಮಕ್ಕಳು ಸೇರಿ ಹೊಲದಲ್ಲಿ ಗಾಳಿಪಟ ಹಾರಿಸಿದರು. ಮಹಿಳೆಯರು ಜೋಕಾಲಿ ಆಡಿ ಸಂಭ್ರಮಿಸಿದರು. ಬರದ ನಡುವೆಯೂ ರೈತರ ಸಂಭ್ರಮ ಕಂಡು ಬಂದಿತು.

ಜನವಾಡ: ಎಳ್ಳ ಅಮವಾಸ್ಯೆಯನ್ನು ಬೀದರ್ ತಾಲ್ಲೂಕಿನಾದ್ಯಂತ ಬುಧವಾರ ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಜನವಾಡ, ಮರಕಲ್, ಅಲಿಯಂಬರ್, ಮಾಳೆಗಾಂವ, ಚಿಮಕೋಡ, ಚಿಲ್ಲರ್ಗಿ, ಕಮಠಾಣ, ಬಗದಲ್, ಮನ್ನಳ್ಳಿ, ಆಣದೂರ, ಬಾವಗಿ ಸೇರಿದಂತೆ ವಿವಿಧೆಡೆ ರೈತರು ರೊಟ್ಟಿಯ ಗಂಟು ಕಟ್ಟಿಕೊಂಡು ಹೊಲಗಳಿಗೆ ತೆರಳಿ ಭೂಮಿ ತಾಯಿಗೆ ಪೂಜೆ ಸಲ್ಲಿಸಿ, ಚರಗ ಚೆಲ್ಲಿ ಎಳ್ಳ ಅಮಾವಾಸ್ಯೆಯನ್ನು ಆಚರಿಸಿದರು.

ರೈತರು ಬಂಧುಗಳು ಹಾಗೂ ಸ್ನೇಹಿತರನ್ನು ತಮ್ಮ ಹೊಲಕ್ಕೆ ಊಟಕ್ಕೆ ಆಹ್ವಾನಿಸಿದರು.

ಭಜ್ಜಿ, ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಜೋಳದ ಅನ್ನ, ಶೇಂಗಾ ಚಟ್ನಿ, ಕರ್ಚಿಕಾಯಿ, ಅಂಬಲಿ ಮೊದಲಾದ ಖಾದ್ಯಗಳನ್ನು ಉಣಬಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.