ಔರಾದ್: ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸಂತಪುರ ಜ್ಞಾನಭಾರತಿ ಪ್ರೌಢಶಾಲೆ ವಿದ್ಯಾರ್ಥಿ ಆದರ್ಶ ವಿಠಲರಾವ ಶೇ 99.20 (620) ಅಂಕ ಪಡೆದು ತಾಲ್ಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಸಂತಪುರ ಅನುಭವ ಮಂಪಟ ಪ್ರೌಢ ಶಾಲೆಯ ವಿದ್ಯಾರ್ಥಿನಿ ನಿವೇದಿತಾ ಸಂತೋಷ ಶೇ 98.72 ಹಾಗೂ ಜ್ಞಾನಭಾರತಿ ಪ್ರೌಢ ಶಾಲೆಯ ವಿದ್ಯಾರ್ಥಿ ಆದಿತ್ಯ ಶೇ 98.72 ಈ ಇಬ್ಬರು ಸಮಾನ ಅಂಕ ಪಡೆದು ತಾಲ್ಲೂಕಿಗೆ ಮೂರನೇ ಸ್ಥಾನ ಪಡೆದಿದ್ದಾರೆ.
ಸಂತಪುರ ಅನುಭವ ಮಂಟಪ ಪ್ರೌಢಶಾಲೆಯ ಕಾರ್ತಿಕ ಸಂಗನಬಸಯ್ಯ ಶೇ 98.56 ಹಾಗೂ ಇದೇ ಶಾಲೆಯ ಐಶ್ವರ್ಯ ಪ್ರಭುಲಿಂಗ ಶೇ 98.40 ಅಂಕ ಪಡೆದು ಕ್ರಮವಾಗಿ ತಾಲ್ಲೂಕಿಗೆ 4ನೇ ಹಾಗೂ 5ನೇ ಸ್ಥಾನ ಪಡೆದಿದ್ದಾರೆ ಎಂದು ಶಿಕ್ಷಣ ಸಂಯೋಜಕ ಬಲಭೀಮ ಕುಲಕರ್ಣಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.