ಕಮಲನಗರ: ತಾಲ್ಲೂಕಿನ ಖತಗಾಂವ ಗ್ರಾಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಡಾ. ರಾಜಕುಮಾರ ಹೆಬ್ಬಾಳೆ ಪರ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಸಂತೋಷ ತೋರ್ಣೆಕರ್ ನೇತೃತ್ವದಲ್ಲಿ ಸದಸ್ಯರ ಮನೆಗಳಿಗೆ ತೆರಳಿ ಚುನಾವಣೆ ಕರಪತ್ರ ನೀಡುವ ಮೂಲಕ ಮತಯಾಚಿಸಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಸಂತೋಷ ತೋರ್ಣೆಕರ್ ಮಾತನಾಡಿ, ಮೇ.9 ರಂದು ನಡೆಯುವ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಡಾ. ರಾಜಕುಮಾರ ಹೆಬ್ಬಾಳೆ ಅವರಿಗೆ ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.
ಹಕ್ಯಾಳ, ಮುರ್ಕಿ ಗ್ರಾಮಗಳಿಗೂ ತೆರಳಿ ಡಾ. ರಾಜಕುಮಾರ ಹೆಬ್ಬಾಳೆ ಪರ ಪ್ರಚಾರ ನಡೆಸುವ ಮೂಲ ಮತಯಾಚಿಸಲಾಗಿದೆ ಎಂದು ತಿಳಿಸಿದರು.
ಮುಖ್ಯಶಿಕ್ಷಕ ಶರಣು ಸೋಲ್ಲಾಪೂರೆ, ಬಿಜೆಪಿ ಮುಖಂಡ ವೀರೇಶ ತೋರಣೇಕರ್, ಕಲ್ಲೇಶ ಉದಗೀರೆ, ಗ್ರಾ.ಪಂ ಸದಸ್ಯ ಸಾಯಿನಾಥ ಕಾಂಬಳೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.