ADVERTISEMENT

ಮಲ್ಲಿಕಾರ್ಜುನ ಖೂಬಾ ಮತಯಾಚನೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 6:51 IST
Last Updated 15 ಏಪ್ರಿಲ್ 2021, 6:51 IST
ಬಸವಕಲ್ಯಾಣ ತಾಲ್ಲೂಕಿನ ಕಿಟ್ಟಾದಲ್ಲಿ ಬುಧವಾರ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಪ್ರಚಾರ ಕೈಗೊಂಡರು
ಬಸವಕಲ್ಯಾಣ ತಾಲ್ಲೂಕಿನ ಕಿಟ್ಟಾದಲ್ಲಿ ಬುಧವಾರ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಪ್ರಚಾರ ಕೈಗೊಂಡರು   

ಬಸವಕಲ್ಯಾಣ: ‘ಕ್ಷೇತ್ರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಮತದಾರರ ತೀರ್ಪು ನನ್ನ ಪರ ಇರಲಿದೆ’ ಎಂದು ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಹೇಳಿದರು.

ಉಪ ಚುನಾವಣೆ ಪ್ರಯುಕ್ತ ಬುಧವಾರ ಕಿಟ್ಟಾ ಗ್ರಾಮದಲ್ಲಿ ಮತ ಯಾಚಿಸಿದ ಅವರು, ‘ಎರಡು ಸಲ ಶಾಸಕನಾಗಿ ಉತ್ತಮ ಕಾರ್ಯ ಕೈಗೊಂಡಿದ್ದೇನೆ. ಅವುಗಳೇ ನನಗೆ ಶ್ರೀರಕ್ಷೆ’ ಎಂದರು.

ಮುಖಂಡರಾದ ಕಾಳಿದಾಸ ಜಾಧವ, ಸಂಜೀವ ಗಾಯಕವಾಡ, ಪಿಂಟು ಕಾಂಬಳೆ, ಶಿವಕುಮಾರ ಬಿರಾದಾರ, ಸಂಜೀವ ಗೋಡಬೋಲೆ, ನಾಗೇಶ, ನೀಲೇಶ ಖೂಬಾ, ರಾಜೀವ ಜಾಧವ, ರಾಜೀವ ಹೊಸಮನಿ, ಇಸ್ಮಾಯಿಲ್‌ ಬೆಳಕೋಣಿ, ಖಯಾ ಮೊದ್ದೀನ್ ರಶೀದ್ ಕುರೇಶಿ ಇದ್ದರು.

ADVERTISEMENT

ನಾರಾಯಣಪುರ, ತಾಂಡಾ, ಹುಲಗುತ್ತಿ, ನಾರಾಯಣಪುರ ವಾಡಿ, ಗೋಕುಳ, ಧನ್ನೂರ, ಜಾನಾಪೂರ, ಮುಚಳಂಬ, ಗೋರ್ಟಾ, ತೊಗಲೂರು ಗ್ರಾಮಗಳಲ್ಲಿಯೂ ಪ್ರಚಾರ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.