ADVERTISEMENT

ಸರ್ಕಾರ ಬೋಸ್ ಜಯಂತಿ ಆಚರಿಸಲಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2021, 14:17 IST
Last Updated 23 ಜನವರಿ 2021, 14:17 IST
ಬೀದರ್‌ನ ಮಂಗಲಪೇಟೆಯ ವೃತ್ತದಲ್ಲಿ ಸುಭಾಷ್‍ಚಂದ್ರ ಬೋಸ್ ಅವರ ಜಯಂತಿ ಆಚರಿಸಲಾಯಿತು
ಬೀದರ್‌ನ ಮಂಗಲಪೇಟೆಯ ವೃತ್ತದಲ್ಲಿ ಸುಭಾಷ್‍ಚಂದ್ರ ಬೋಸ್ ಅವರ ಜಯಂತಿ ಆಚರಿಸಲಾಯಿತು   

ಬೀದರ್: ಸುಭಾಷ್‍ಚಂದ್ರ ಬೋಸ್ ಜಯಂತಿಯನ್ನು ಪ್ರತಿ ವರ್ಷ ರಾಜ್ಯ ಸರ್ಕಾರವೇ ಆಚರಿಸಬೇಕು ಎಂದು ಜೈ ಹಿಂದ್ ಸಂಘಟನೆ ಅಧ್ಯಕ್ಷ ವೀರೂ ದಿಗ್ವಾಲ್ ಒತ್ತಾಯಿಸಿದರು.

ನಗರದ ಮಂಗಲಪೇಟ್ ಬಡಾವಣೆಯ ವೃತ್ತದಲ್ಲಿ ನಡೆದ ಸುಭಾಷ್‍ಚಂದ್ರ ಬೋಸ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯುವಕರು ಬೋಸ್ ಅವರ ತತ್ವ, ಆದರ್ಶಗಳನ್ನು ಪಾಲಿಸಬೇಕು. ದೇಶಾಭಿಮಾನ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ADVERTISEMENT

ನಗರಸಭೆ ಮಾಜಿ ಉಪಾಧ್ಯಕ್ಷ ಫಿಲೋಮನ್‍ರಾಜ್ ಪ್ರಸಾದ್, ದೇವೇಂದ್ರ ದಿಗ್ವಾಲ್, ಸುಭಾಷ ಮಡಿವಾಳ, ದತ್ತು ಗುತ್ತೇದಾರ್, ಡಾ. ಶಾಮರಾವ್, ಅಭಿಷೇಕ ರೆಡ್ಡಿ ಇದ್ದರು.

ಶೌರ್ಯ ದಿನ ಆಚರಣೆ: ಇಲ್ಲಿಯ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಜಯಂತಿಯನ್ನು ಶೌರ್ಯ ದಿನವಾಗಿ ಆಚರಿಸಲಾಯಿತು.

ಪಕ್ಷದ ನಗರ ಘಟಕದ ಅಧ್ಯಕ್ಷ ಹಣಮಂತ ಬುಳ್ಳಾ, ಪ್ರಧಾನ ಕಾರ್ಯದರ್ಶಿ ಸುನೀಲ್ ಗೌಳಿ, ಗೋಪಾಲಕೃಷ್ಣ, ಸಂತೋಷ ಪಾಟೀಲ, ಸಂಜು ಜೀರ್ಗೆ, ಮೃತ್ಯುಂಜಯ, ವಿಶಾಲ್ ಅತಿವಾಳೆ, ಪವನ್ ಉಂಡೆ, ರಾಜು ಕೋಮಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.