ADVERTISEMENT

ಬುದ್ಧ ವಿಹಾರಕ್ಕೆ ಶಾಸಕ ಕಾಶೆಂಪೂರ ಭೇಟಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2021, 15:44 IST
Last Updated 15 ಅಕ್ಟೋಬರ್ 2021, 15:44 IST
ಅಶೋಕ ವಿಜಯ ದಶಮಿ ಪ್ರಯುಕ್ತ ಶುಕ್ರವಾರ ಬೀದರ್‌ ತಾಲ್ಲೂಕಿನ ರೇಕುಳಗಿ ಮೌಂಟ್‌ನ ಅನಾಥ ಪಿಂಡಕ ಬುದ್ಧ ವಿಹಾರಕ್ಕೆ ಭೇಟಿ ನೀಡಿದ ಶಾಸಕ ಬಂಡೆಪ್ಪ ಕಾಶೆಂಪೂರ ಅವರನ್ನು ಸನ್ಮಾನಿಸಲಾಯಿತು
ಅಶೋಕ ವಿಜಯ ದಶಮಿ ಪ್ರಯುಕ್ತ ಶುಕ್ರವಾರ ಬೀದರ್‌ ತಾಲ್ಲೂಕಿನ ರೇಕುಳಗಿ ಮೌಂಟ್‌ನ ಅನಾಥ ಪಿಂಡಕ ಬುದ್ಧ ವಿಹಾರಕ್ಕೆ ಭೇಟಿ ನೀಡಿದ ಶಾಸಕ ಬಂಡೆಪ್ಪ ಕಾಶೆಂಪೂರ ಅವರನ್ನು ಸನ್ಮಾನಿಸಲಾಯಿತು   

ಜನವಾಡ: 65ನೇ ಧಮ್ಮ ಚಕ್ರ ಪರಿವರ್ತನ ಹಾಗೂ ಅಶೋಕ ವಿಜಯ ದಶಮಿ ಅಂಗವಾಗಿ ಬೀದರ್‌ ತಾಲ್ಲೂಕಿನ ರೇಕುಳಗಿ ಮೌಂಟ್‌ನ ಅನಾಥ ಪಿಡಂಕ ಬುದ್ಧ ವಿಹಾರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೀದರ್‌ ದಕ್ಷಿಣ ಶಾಸಕ ಬಂಡೆಪ್ಪ ಕಾಶೆಂಪೂರ್‌ ಪಾಲ್ಗೊಂಡು, ಗೌತಮ ಬುದ್ಧರ ಪ್ರತಿಮೆಯ ದರ್ಶನ ಪಡೆದರು.

ಬುದ್ಧ ವಿಹಾರದ ಭಂತೆಗಳೊಂದಿಗೆ ಮಾತುಕತೆ ನಡೆಸಿದರು. ಭಂತೆಗಳು ಕಾಶೆಂಪೂರ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು.

ಮುಖಂಡರಾದ ಸಂತೋಷ ಎಸ್. ರಾಸೂರು, ಮಲ್ಲಪ್ಪ ಮನ್ನಾಎಖೆಳ್ಳಿ, ಪಾಂಡುರಂಗ ಕಿರಣ್, ಶಿವು ಮನ್ನಾಎಖೆಳ್ಳಿ, ಸಮದ್, ಪಾಂಡುರಂಗ ನಿಡವಂಡ, ವಿಜಯಕುಮಾರ ಪಬ್ಬ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.