ಜನವಾಡ: 65ನೇ ಧಮ್ಮ ಚಕ್ರ ಪರಿವರ್ತನ ಹಾಗೂ ಅಶೋಕ ವಿಜಯ ದಶಮಿ ಅಂಗವಾಗಿ ಬೀದರ್ ತಾಲ್ಲೂಕಿನ ರೇಕುಳಗಿ ಮೌಂಟ್ನ ಅನಾಥ ಪಿಡಂಕ ಬುದ್ಧ ವಿಹಾರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೀದರ್ ದಕ್ಷಿಣ ಶಾಸಕ ಬಂಡೆಪ್ಪ ಕಾಶೆಂಪೂರ್ ಪಾಲ್ಗೊಂಡು, ಗೌತಮ ಬುದ್ಧರ ಪ್ರತಿಮೆಯ ದರ್ಶನ ಪಡೆದರು.
ಬುದ್ಧ ವಿಹಾರದ ಭಂತೆಗಳೊಂದಿಗೆ ಮಾತುಕತೆ ನಡೆಸಿದರು. ಭಂತೆಗಳು ಕಾಶೆಂಪೂರ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು.
ಮುಖಂಡರಾದ ಸಂತೋಷ ಎಸ್. ರಾಸೂರು, ಮಲ್ಲಪ್ಪ ಮನ್ನಾಎಖೆಳ್ಳಿ, ಪಾಂಡುರಂಗ ಕಿರಣ್, ಶಿವು ಮನ್ನಾಎಖೆಳ್ಳಿ, ಸಮದ್, ಪಾಂಡುರಂಗ ನಿಡವಂಡ, ವಿಜಯಕುಮಾರ ಪಬ್ಬ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.