ಭಾಲ್ಕಿ: ತಾಲ್ಲೂಕಿನ ಭಾತಂಬ್ರಾ ಗ್ರಾಮದ ಮುಖ್ಯರಸ್ತೆ, ಗ್ರಾಮದಲ್ಲಿನ 12, ಆನಂದವಾಡಿ ಗ್ರಾಮದಲ್ಲಿನ 5 ಸೇರಿದಂತೆ ಒಟ್ಟು 17 ಅನಧಿಕೃತ ಮೂರ್ತಿಗಳನ್ನು ತಹಶೀಲ್ದಾರ್ ಅಣ್ಣಾರಾವ್ ಪಾಟೀಲ, ಡಿವೈಎಸ್ಪಿ ದೇವರಾಜ್ ಬಿ. ನೇತೃತ್ವದ ಅಧಿಕಾರಿಗಳ ತಂಡ ತೆರವುಗೊಳಿಸಿತು.
ಭಾತಂಬ್ರಾ ಗ್ರಾಮದಲ್ಲಿ ಬೋಮ್ಮಗೊಂಡೇಶ್ವರ, ಅಂಬೇಡ್ಕರ್, ಸುಭಾಶ ಚಂದ್ ರಬೋಸ್ ವೃತ್ತ, ಗಣೇಶ, ಪೀರ್ ಕಟ್ಟೆ, ಶಿವಾಜಿ ವೃತ್ತ, ಬಸವೇಶ್ವರ ಮೂರ್ತಿ, ಅಗ್ಗಿ ಬಸವಣ್ಣ, ಕ್ರಿಶ್ಚಿಯನ್, ಅಂಬೇಡ್ಕರ್ ವೃತ್ತ-2, ಕ್ರಿಶ್ಚಿಯನ್ ವೃತ್ತ-2, ಡೋಹರ ಕಕ್ಕಯ್ಯ ವೃತ್ತ ಸೇರಿದಂತೆ ಒಟ್ಟು 12 ಮೂರ್ತಿಗಳನ್ನು ತೆರವುಗೊಳಿಸಿದರು. ಮೂರ್ತಿ ತೆರವಿಗೂ ಮುಂಚೆ ಎಲ್ಲ ವೃತ್ತಗಳಿಗೆ ಪೂಜೆ ಸಲ್ಲಿಸಿದರು.
ಈ ಹಿಂದೆ ಗ್ರಾಮದಲ್ಲಿ ಹೆದ್ದಾರಿ ರಸ್ತೆ ನಿರ್ಮಾಣ ಕಾಮಗಾರಿ ನಡೆದಾಗ ಮೂರ್ತಿಗಳನ್ನು ತೆರವುಗೊಳಿಸುವ ಸಂಬಂಧ ಹಿರಿಯ ಅಧಿಕಾರಿಗಳು ಸಾಕಷ್ಟು ಪ್ರಯತ್ನ ಮಾಡಿದ್ದರೂ ಸಾಧ್ಯವಾಗಿರಲಿಲ್ಲ.
ಈಗ ತಹಶೀಲ್ದಾರ್, ಡಿವೈಎಸ್ಪಿ ಎಲ್ಲ ಸಮಾಜದ ಪ್ರಮುಖರನ್ನು, ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೂರ್ತಿ ತೆರವುಗೊಳಿಸಿರುವುದು
ಮೆಚ್ಚುಗೆಯ ಕಾರ್ಯ ಎಂದು ಗ್ರಾಮಸ್ಥರಾದ ಸಿದ್ದು, ಪ್ರವೀಣ ತಿಳಿಸಿದರು.
ಆನಂದವಾಡಿ ಗ್ರಾಮದಲ್ಲಿ ಬಸವೇಶ್ವರ, ಬೋಮ್ಮಗೊಂಡೇಶ್ವರ, ನೂಲಿಯ ಚಂದಯ್ಯ, ಸುಭಾಷಚಂದ್ರ ಬೋಸ್ ವೃತ್ತ ಹಾಗೂ ಗಣೇಶಕಟ್ಟೆಯನ್ನು ಸಹತೆರವುಗೊಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.