ADVERTISEMENT

ಯುವಕನ ಕೊಲೆ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2022, 4:56 IST
Last Updated 20 ಏಪ್ರಿಲ್ 2022, 4:56 IST

ಔರಾದ್: ತಾಲ್ಲೂಕಿನ ಸಂತಪುರ ಹೊರ ವಲಯದಲ್ಲಿ ಈಚೆಗೆ ನಡೆದ ಡಿಗ್ಗಿ ಗ್ರಾಮದ ಯುವಕ ಅಂತೇಶ್ವರ ಬನವಾಸಿ ಕೊಲೆ ಪ್ರಕರಣ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಡಿಗ್ಗಿ ಗ್ರಾಮದ ಪ್ರವೀಣಕುಮಾರ ಬಿರಾದಾರ (ಪಿಂಟು), ಮದನೂರ ಗ್ರಾಮದ ದತ್ತು ಕಿಶನ ತೇಲಂಗ ಹಾಗೂ ಶಿವಕುಮಾರ ಕಲ್ಯಾಣಿ ಬಂಧಿತ ಆರೋಪಿಗಳು. ಭಾಲ್ಕಿ ಡಿವೈಎಸ್ಪಿ ಜೇಮ್ಸ್ ಲಾಯ್ ಜೆವಿಯರ್ ಮೆನಜೇಸ್ ನೇತೃತ್ವದಲ್ಲಿ ಸಿಪಿಐ ರವೀಂದ್ರ, ಪಿಎಸ್‍ಐ ಸಿದ್ದಣ್ಣ ಗಿರಿಗೌಡರ್, ಸಿದ್ದಲಿಂಗ, ಪೇದೆ ಸುನೀಲ ಕೋರೆ, ರಾಜಕುಮಾರ ರೆಡ್ಡಿ ಆರೋಪಿಗಳನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT