ಹುಮನಾಬಾದ್: ಹುಮನಾಬಾದ್ ಉಪವಿಭಾಗ ಪೊಲೀಸ್ ಠಾಣೆಗೆ ನೂತನ ಡಿವೈಎಸ್ಪಿಯಾಗಿ ಮಡೋಳಪ್ಪ ಅವರು ಅಧಿಕಾರಿ ಸ್ವೀಕರಿಸಿದರು.
ನಂತರ ಹುಮನಾಬಾದ್ , ಬಸವಕಲ್ಯಾಣ , ಹುಲಸೂರ, ಚಿಟಗುಪ್ಪ ತಾಲ್ಲೂಕುಗಳ ಬಗ್ಗೆ ಮಾಹಿತಿ ಪಡೆದು, ಕಾನೂನು ಸುವ್ಯವಸ್ಥೆ ಕಾಪಾಡುವ ಜತೆಗೆ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಪಿಎಸ್ಐ ಸುರೇಶ್ ಕುಮಾರ್, ಎಎಸ್ಐ ರಮೇಶ, ಸಿಬ್ಬಂದಿಗಳಾದ ಭಗವಂತ ಸಿಂಧೋಲ್ , ಪ್ರಲ್ಹಾದ , ಐ.ಎಸ್. ಶಕೀಲ್, ವಸಂತ, ರೇಣುಕಾ, ರಾಜಕುಮಾರ್ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.