ADVERTISEMENT

ದಾಬಕಾ(ಸಿ): ಪಿಂಚಣಿ ಅದಾಲತ್

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 12:34 IST
Last Updated 13 ಡಿಸೆಂಬರ್ 2019, 12:34 IST
ಕಮಲನಗರ ತಾಲ್ಲೂಕಿನ ದಾಬಕಾ(ಸಿ) ನಾಡ ತಹಸೀಲ್ ಕಚೇರಿಯಲ್ಲಿ ನಡೆದ ಪಿಂಚಣಿ ಹಾಗೂ ಕಂದಾಯ ಅದಾಲತ್‌ನಲ್ಲಿ ಕಮಲನಗರ ತಹಸೀಲ್ದಾರ್ ರಮೇಶ ಪೇದ್ದೆ  ಅಹವಾಲು ಸ್ವೀಕರಿಸಿದರು
ಕಮಲನಗರ ತಾಲ್ಲೂಕಿನ ದಾಬಕಾ(ಸಿ) ನಾಡ ತಹಸೀಲ್ ಕಚೇರಿಯಲ್ಲಿ ನಡೆದ ಪಿಂಚಣಿ ಹಾಗೂ ಕಂದಾಯ ಅದಾಲತ್‌ನಲ್ಲಿ ಕಮಲನಗರ ತಹಸೀಲ್ದಾರ್ ರಮೇಶ ಪೇದ್ದೆ  ಅಹವಾಲು ಸ್ವೀಕರಿಸಿದರು   

ಕಮಲನಗರ: ‘ನೂತನ ತಾಲ್ಲೂಕು ಕೇಂದ್ರ, ದಾಬಕಾ ಹೋಬಳಿ ಕೇಂದ್ರದ ಸುತ್ತಮುತ್ತಲಿನ 16 ಗ್ರಾಮಗಳು ಸೇರ್ಪಡೆಯಾಗಿವೆ. ಅದಾಲತ್‍ನಲ್ಲಿ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಸ್ಪಂದಿಸಿ ಪರಿಹರಿಸಲಾಗುವುದು’ ಎಂದು ಕಮಲನಗರ ತಹಶೀಲ್ದಾರ್ ರಮೇಶ ಪೇದ್ದೆ ಹೇಳಿದರು.

ಮಹಾರಾಷ್ಟ್ರದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ದಾಬಕಾ(ಸಿ) ಗ್ರಾಮದ ನಾಡ ತಹಸೀಲ್ ಕಚೇರಿಯಲ್ಲಿ ನಡೆದ ಪಿಂಚಣಿ ಹಾಗೂ ಕಂದಾಯ ಅದಾಲತ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ವಿಧವಾ , ವೃದ್ಧಾಪ್ಯ, ಅಂಗವಿಕಲ, ಇಂದಿರಾ ವೇತನ, ಸಂಧ್ಯಾ ಸುರಕ್ಷಾ, ರೈತರ ಪಹಣಿ ತಿದ್ದುಪಡಿ ಸೇರಿದಂತೆ ವಿವಿಧ ತಾಂತ್ರಿಕ ದೋಷಗಳಿಂದ ನನೆಗುದಿಗೆ ಬಿದ್ದಿದ್ದು, ಶೀಘ್ರದಲ್ಲಿಯೇ ವಿಲೇವಾರಿ ಮಾಡುವುದಾಗಿ ತಿಳಿಸಿದರು.

ADVERTISEMENT

ಮನಸ್ವಿನಿ-02, ವಿಧವಾ ವೇತನ-02 ಅಂಗವಿಕಲವೇತನ 06, ಎಸ್‌ಎಸ್‌ವೈ 18, ಇಂದಿರಾಗಾಂಧಿ ವೇತನ 10, ಹಾಗೂ ಪಹಣಿ ತಿದ್ದುಪಡಿ 02 ಜನಸಾಮಾನ್ಯರ ಮತ್ತು ಗ್ರಾಮೀಣ ರೈತರು, ವಿಧವಾ ವೇತನದಾರರ, ಅಂಗವೀಕಲರ ವೇತರ ಸೇರಿದಂತೆ ಇನ್ನಿತರ ಸಮಸ್ಯೆಗಳ ಮತ್ತು ಕುಂದು ಕೊರತೆಯಿದ್ದಲ್ಲಿ ಕೂಡಲೇ ಕಂದಾಯ ಅದಾಲತ್‍ದಲ್ಲಿ ಮನವಿ ಸಲ್ಲಿಸಬಹುದಾಗಿದೆ ಎಂದು ಮನವಿ ಮಾಡಿದರು.

ನಾಡ ತಹಸೀಲ್ದಾರ್ ಸೋಮಶೇಖರ, ಗ್ರಾಮ ಲೆಕ್ಕಿಗ ಸಂಜೀವಕುಮಾರ ರಾಠೋಡ ಹಾಗೂ ತಲಾಟಿ ಸುನೀಕುಮಾರ ಸಾಗರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.