ಬೀದರ್: ತುರ್ತು ಕೆಲಸದ ನಿಮಿತ್ತ ಜಿಲ್ಲೆಯ ವಿವಿಧೆಡೆ ಮಂಗಳವಾರ (ನ.30) ವಿದ್ಯುತ್ ನಿಲುಗಡೆಯಾಗಲಿದೆ.
ಮನ್ನಾಎಖ್ಖೆಳ್ಳಿಯ 110 ಕೆ.ವಿ. ಉಪ ಕೇಂದ್ರದ ಮೇಲೆ ಬರುವ ಮರಕುಂದಾ, ನಿಡವಂಚಾ, ಖೇಣಿರಂಜೋಳ, ಭಂಗೂರ, ಮೀನಕೇರಾ, ಮಂಗಲಗಿ, ರೇಕುಳಗಿ, ಮನ್ನಾಎಖ್ಖೆಳ್ಳಿ (ಗ್ರಾಮೀಣ)ಯ 11 ಕೆ.ವಿ, ಬಗದಲ್ ಮತ್ತು ಬೇಮಳಖೇಡದ 33 ಕೆ.ವಿ ವಿದ್ಯುತ್ ವಿತರಣಾ ಕೇಂದ್ರಗಳ ವ್ಯಾಪ್ತಿಯಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4 ರ ವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ಜೆಸ್ಕಾಂ ಬೀದರ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.
ಸಂತಪುರ ಉಪ ಕೇಂದ್ರದಲ್ಲಿ ಕೆಲಸವಿರುವ ಕಾರಣ ಬೆಳಿಗ್ಗೆ 8 ರಿಂದ ಸಂಜೆ 4 ರ ವರೆಗೆ ಸಂತಪುರ, ಕೌಠಾ, ಬಲ್ಲೂರ, ಹಿಪ್ಪಳಗಾಂವ, ಚಾಂದೋರಿ, ಹೆಡಗಾರಪುರದ 11 ಕೆ.ವಿ, ವಡಗಾಂವ, ಮುಧೋಳದ 33 ಕೆ.ವಿ, ಡೊಂಗರಗಾಂವ ಮತ್ತು ಕಮಲನಗರದ 110 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರಗಳ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ ಎಂದು ಜೆಸ್ಕಾಂ ಭಾಲ್ಕಿ ಉಪ ಕೇಂದ್ರದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.