ಬಸವ ಕಲ್ಯಾಣ: ಇಲ್ಲಿನ ತ್ರಿಪುರಾಂತದ ಪ್ರವಾಸಿ ಮಂದಿರ ಎದುರಲ್ಲಿ ಮಂಗಳವಾರ ವಿವಿಧ ದಲಿತ ಸಂಘಟನೆಗಳಿಂದ ಸಂವಿಧಾನ ಅಂಗೀಕಾರ ದಿನಾಚರಣೆ ಆಯೋಜಿಸಿ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರಿಗೆ ನಮನ ಸಲ್ಲಿಸಲಾಯಿತು.
ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮೇತ್ರೆ ಡಾ.ಅಂಬೇಡ್ಕರ್ ಭಾವಚಿತ್ರದ ಪೂಜೆ ನೆರವೇರಿಸಿದರು. ಮಿಲಿಂದ್ ಗುರೂಜಿ ಪ್ರಾರ್ಥನೆ ನಡೆಸಿದರು. ರವಿ ಗಾಯಕವಾಡ ಪ್ರತಾಪುರ, ಸಂಜೀವ ಖೇಲೆ, ಮನೋಜಕುಮಾರ ಮುಡಬಿಕರ್, ಶ್ರೀನಿವಾಸ ಕಾಂಗೆ, ನಿತೀನ ಡಾಂಗೆ, ಕವಿರಾಜ ಕಿಣಗಿ, ರಾಜೀವ ತುತಾರೆ, ಸಚಿನ್ ಲಾಖೆ ಹಾಗೂ ಲೋಕೇಶ ಕಾಂಗೆ ಇದ್ದರು.
ಶಾಲೆ: ಇಲ್ಲಿನ ಸರ್ಕಾರಿ ಕನ್ನಡ ಮತ್ತು ಉರ್ದು ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕ ಬಸವಣ್ಣಪ್ಪ ನೆಲ್ಲಗಿ ಅಧ್ಯಕ್ಷತೆಯಲ್ಲಿ ಸಂವಿಧಾನ ಅಂಗೀಕಾರ ದಿನಾಚರಣೆ ಆಯೋಜಿಸಲಾಗಿತ್ತು.
ವಿಶ್ವನಾಥಯ್ಯ ಭಾವಚಿತ್ರದ ಪೂಜೆ ನೆರವೇರಿಸಿದರು. ಸುನಿತಾ ಪಾಟೀಲ, ಚಂದ್ರಕಲಾ ಮಾತನಾಡಿ ಸಂವಿಧಾನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.