ADVERTISEMENT

ಧರ್ಮದಿಂದಲೇ ಅಭ್ಯುದಯ

ಶಿವಕುಮಾರ ಸ್ವಾಮೀಜಿ, ಸಿದ್ಧಾರೂಢ ಮಠ, ಬೀದರ್

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2020, 13:41 IST
Last Updated 2 ನವೆಂಬರ್ 2020, 13:41 IST
ಶಿವಕುಮಾರ ಸ್ವಾಮೀಜಿ ಸಿದ್ಧಾರೂಢ ಮಠ, ಬೀದರ್
ಶಿವಕುಮಾರ ಸ್ವಾಮೀಜಿ ಸಿದ್ಧಾರೂಢ ಮಠ, ಬೀದರ್   

ಬೀದರ್‌: ಧರ್ಮದಿಂದಲೇ ಸುಖವೆಂದ ಬಳಿಕ ಧರ್ಮ ಸಂಗ್ರಹಿಸುವುದು ಪರಮ ಪುರುಷಾರ್ಥವಾಗಿದೆ. ಧರ್ಮ ರಹಿತ ಅರ್ಥ ಕಾಮಗಳೆರಡೂ ತ್ಯಾಜ್ಯಗಳೆಂಬುದು ಅನುಭಾವಿಗಳ ಮಾತು.
ಧರ್ಮ, ಅಧರ್ಮಗಳ ಬಗ್ಗೆ ಶಾಸ್ತ್ರಗಳಲ್ಲಿ ಹಲವು ಬಗೆಯಲ್ಲಿ ವಿವರಿಸಲಾಗಿದೆ. ಉತ್ತಮ ಭೋಗ, ಉತ್ತಮ ಲೋಕ, ಉತ್ತಮ ಜನ್ಮಗಳನ್ನು ಕೊಡುವುದು ಯಾವುದೋ ಅದನ್ನು ಧರ್ಮವೆನ್ನುವರು. ತದ್ವಿರುದ್ಧ ಫಲ ಕೊಡುವುದಕ್ಕೆ ಅಧರ್ಮವೆನ್ನುತ್ತಾರೆ.

"ಧರ್ಮೇಣಗಮನಮೂಧ್ರ್ವಂಗಮನಮಧಸ್ತಾತ್ ಭವತ್ಯಧರ್ಮೇಣ (ಸಾಂಖ್ಯಕಾರಿಕಾ)"
ಧರ್ಮವು ಮನುಷ್ಯನನ್ನು ನರಕಕ್ಕೆ ಹೋಗಲು ಕೊಡದೆ, ದುಃಖಿಯನ್ನಾಗಿ ಮಾಡದೆ, ಸದಾ ಸುಖವನ್ನು ಕೊಡುತ್ತದೆ. ಅಂತೆಯೇ "ಧಾರಣಾತ್ ಧರ್ಮ" ಎಂದು ಕರೆಯಲಾಗಿದೆ. ಧರ್ಮದಿಂದಲೇ ಅಭ್ಯುದಯ ಮತ್ತು ನಿಶ್ರೇಯಸ್ಸುಗಳೆರಡೂ ದೊರಕುತ್ತವೆ. ಆದ್ದರಿಂದ ಪ್ರಧಾನ ಪುರುಷಾರ್ಥವು ಧರ್ಮವೇ ಆಗಿದೆ.
ಧರ್ಮದಿಂದಲೇ ಭಕ್ತಿ, ಜ್ಞಾನಗಳು ಜನಿಸುತ್ತವೆ. ಜೈಮಿನಿ ಋಷಿಯು ಇದೆ ಅಭಿಪ್ರಾಯದಿಂದಲೇ ಮೀಮಾಂಸಾಶಾಸ್ತ್ರದ ರಚನೆಗೈದಿದ್ದಾರೆ.

ಧರ್ಮವೇ ಜಗತ್ತಿನ ಸ್ಥಿತಿಗತಿಗೆ ಕಾರಣವಾಗಿದೆ. ಪ್ರತಿಯೊಂದು ಜೀವಿಯ ಕಲ್ಯಾಣವು, ಇಹಪರದಲ್ಲಿ ಸೌಖ್ಯ ಧರ್ಮದಿಂದಲೇ ಸಾಧ್ಯ. ವ್ಯಕ್ತಿ, ಜಾತಿ, ಸಮಾಜ, ರಾಜ್ಯ, ರಾಷ್ಟ್ರಗಳ ಅಭ್ಯುದಯವು ಧರ್ಮದಲ್ಲಿಯೇ ನಿಹಿತವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.