ಬೀದರ್: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬುಧವಾರ ಮಳೆಯಾಗಿದೆ. ಬೀದರ್, ಭಾಲ್ಕಿ, ಔರಾದ್ ಹಾಗೂ ಕಮಲನಗರದಲ್ಲಿ ಮಳೆ ಸುರಿದಿದೆ.
ಬೀದರ್ ನಗರದಲ್ಲಿ ಮಧ್ಯಾಹ್ನ ಕೆಲ ಹೊತ್ತು ಸಾಧಾರಣ ಹಾಗೂ ಬಿರುಸಿನಿಂದ ಕೂಡಿದ ಮಳೆ ಸುರಿದಿದ್ದರಿಂದ ತಗ್ಗು ಪ್ರದೇಶಗಳಲ್ಲಿ ನೀರು ನಿಂತುಕೊಂಡಿತ್ತು. ಗಾಂಧಿ ಗಂಜ್ನಲ್ಲಿ ಮಾರಾಟಕ್ಕೆ ತಂದಿದ್ದ ಆಹಾರ ಧಾನ್ಯಗಳ ರಕ್ಷಣೆ ಮಾಡಲು ರೈತರು ಪರದಾಡಿದರು. ರಸ್ತೆ ಮೇಲೆ ಇಟ್ಟಿದ್ದ ಬೇಳೆ ಕಾಳುಗಳ ಚೀಲಗಳ ಮೇಲೆ ತಾಡಪತ್ರಿ ಹಾಕಿ ರಕ್ಷಣೆ ಒಗದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.