ADVERTISEMENT

ಜಿಲ್ಲೆಯ ವಿವಿಧೆಡೆ ಮಳೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 15:08 IST
Last Updated 30 ಸೆಪ್ಟೆಂಬರ್ 2020, 15:08 IST
ಬೀದರ್‌ನ ಗಾಂಧಿ ಗಂಜ್‌ನಲ್ಲಿ ಮಳೆಯ ನೀರು ಮಾರುಕಟ್ಟೆಯೊಳಗೆ ನುಗ್ಗಿದ ದೃಶ್ಯ
ಬೀದರ್‌ನ ಗಾಂಧಿ ಗಂಜ್‌ನಲ್ಲಿ ಮಳೆಯ ನೀರು ಮಾರುಕಟ್ಟೆಯೊಳಗೆ ನುಗ್ಗಿದ ದೃಶ್ಯ   

ಬೀದರ್: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬುಧವಾರ ಮಳೆಯಾಗಿದೆ. ಬೀದರ್, ಭಾಲ್ಕಿ, ಔರಾದ್ ಹಾಗೂ ಕಮಲನಗರದಲ್ಲಿ ಮಳೆ ಸುರಿದಿದೆ.

ಬೀದರ್ ನಗರದಲ್ಲಿ ಮಧ್ಯಾಹ್ನ ಕೆಲ ಹೊತ್ತು ಸಾಧಾರಣ ಹಾಗೂ ಬಿರುಸಿನಿಂದ ಕೂಡಿದ ಮಳೆ ಸುರಿದಿದ್ದರಿಂದ ತಗ್ಗು ಪ್ರದೇಶಗಳಲ್ಲಿ ನೀರು ನಿಂತುಕೊಂಡಿತ್ತು. ಗಾಂಧಿ ಗಂಜ್‌ನಲ್ಲಿ ಮಾರಾಟಕ್ಕೆ ತಂದಿದ್ದ ಆಹಾರ ಧಾನ್ಯಗಳ ರಕ್ಷಣೆ ಮಾಡಲು ರೈತರು ಪರದಾಡಿದರು. ರಸ್ತೆ ಮೇಲೆ ಇಟ್ಟಿದ್ದ ಬೇಳೆ ಕಾಳುಗಳ ಚೀಲಗಳ ಮೇಲೆ ತಾಡಪತ್ರಿ ಹಾಕಿ ರಕ್ಷಣೆ ಒಗದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT