ADVERTISEMENT

ವಿಎಚ್‍ಪಿಯಿಂದ ರಕ್ಷಾ ಬಂಧನ ಆಚರಣೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2021, 11:07 IST
Last Updated 23 ಆಗಸ್ಟ್ 2021, 11:07 IST
ವಿಶ್ವ ಹಿಂದೂ ಪರಿಷತ್‍ನಿಂದ ಬೀದರ್‌ನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್ ಅವರಿಗೆ ರಾಖಿ ಕಟ್ಟಲಾಯಿತು
ವಿಶ್ವ ಹಿಂದೂ ಪರಿಷತ್‍ನಿಂದ ಬೀದರ್‌ನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್ ಅವರಿಗೆ ರಾಖಿ ಕಟ್ಟಲಾಯಿತು   

ಬೀದರ್: ವಿಶ್ವ ಹಿಂದೂ ಪರಿಷತ್‍ನಿಂದ ನಗರದಲ್ಲಿ ರಕ್ಷಾ ಬಂಧನ ಹಬ್ಬ ಆಚರಿಸಲಾಯಿತು.

ಪರಿಷತ್ ಪದಾಧಿಕಾರಿಗಳು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್, ಬೀದರ್ ಡಿವೈಎಸ್‍ಪಿ ಕೆ.ಎಂ. ಸತೀಶ್, ಗಾಂಧಿಗಂಜ್ ಠಾಣೆ ಪೊಲೀಸ್ ಇನ್‍ಸ್ಪೆಕ್ಟರ್ ಮಲ್ಲಮ್ಮ ಚೌಬೆ ಅವರಿಗೆ ರಾಖಿ ಕಟ್ಟಿ ಹಬ್ಬದ ಶುಭ ಕೋರಿದರು.

ಗಾಂಧಿಗಂಜ್ ಠಾಣೆಯಲ್ಲಿ ವಿಚಾರಣಾಧೀನ ಕೈದಿ, ಗುಂಪಾ ರಸ್ತೆಯಲ್ಲಿ ಕಾರ್ಮಿಕರಿಗೂ ರಾಖಿ ಕಟ್ಟಿ ಗಮನ ಸೆಳೆದರು.

ADVERTISEMENT

ಭಾರತೀಯ ಪರಂಪರೆಯಲ್ಲಿ ಹಬ್ಬಗಳಿಗೆ ವಿಶೇಷ ಮಹತ್ವ ಇದೆ. ರಕ್ಷಾ ಬಂಧನ ಸೋದರ ಬಾಂಧವ್ಯ ಬೆಸೆಯುವ ಪವಿತ್ರ ಹಬ್ಬವಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ರಾಮಕೃಷ್ಣ ಸಾಳೆ ಹೇಳಿದರು.

ಉಪಾಧ್ಯಕ್ಷೆ ಕಲ್ಪನಾ ದೇಶಪಾಂಡೆ, ಕಾರ್ಯದರ್ಶಿ ಸತೀಶ ನೌಬಾದೆ, ಜಂಟಿ ಕಾರ್ಯದರ್ಶಿ ರಾಜಕುಮಾರ ಅಳ್ಳೆ, ಬೀದರ್ ನಗರ ಘಟಕದ ಅಧ್ಯಕ್ಷ ವೀರೇಂದ್ರ ಶಾಸ್ತ್ರಿ, ಸದಸ್ಯರಾದ ಕಾಮಶೆಟ್ಟಿ ಚಿಕ್ಕಬಸೆ, ಸಂಗೀತಾ, ಶ್ರೀಕಾಂತ ಮೋದಿ, ಬಜರಂಗ ದಳ ಜಿಲ್ಲಾ ಸಂಯೋಜಕ ಸುನೀಲ್ ದಳವೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.