ADVERTISEMENT

ಕೋವಿಡ್ ಸೆಂಟರ್‌ನಲ್ಲಿ ರಕ್ಷಾ ಬಂಧನ ಆಚರಣೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2020, 16:02 IST
Last Updated 3 ಆಗಸ್ಟ್ 2020, 16:02 IST
ಬೀದರ್‌ನ ಶಹಾಪುರ ಗೇಟ್ ಬಳಿಯ ಶಾಹೀನ್ ಹಾಸ್ಟೆಲ್‍ನಲ್ಲಿ ಇರುವ ಕೋವಿಡ್ ಕೇರ್‌ ಸೆಂಟರ್‌ನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಿಬ್ಬಂದಿ ವಿಜಯಕೃಷ್ಣ ಸೋಲಪುರ ಅವರಿಗೆ ಮನ್ನಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಾಧಿಕಾರಿ ಶಕುಂತಲಾ ಶಿರೋಮಣಿ ರಾಖಿ ಕಟ್ಟಿದರು
ಬೀದರ್‌ನ ಶಹಾಪುರ ಗೇಟ್ ಬಳಿಯ ಶಾಹೀನ್ ಹಾಸ್ಟೆಲ್‍ನಲ್ಲಿ ಇರುವ ಕೋವಿಡ್ ಕೇರ್‌ ಸೆಂಟರ್‌ನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಿಬ್ಬಂದಿ ವಿಜಯಕೃಷ್ಣ ಸೋಲಪುರ ಅವರಿಗೆ ಮನ್ನಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಾಧಿಕಾರಿ ಶಕುಂತಲಾ ಶಿರೋಮಣಿ ರಾಖಿ ಕಟ್ಟಿದರು   

ಬೀದರ್: ಇಲ್ಲಿಯ ಶಹಾಪುರ ಗೇಟ್ ಬಳಿಯ ಶಾಹೀನ್ ಹಾಸ್ಟೆಲ್‍ನಲ್ಲಿ ಇರುವ ಕೋವಿಡ್ ಕೇರ್ ಸೆಂಟರ್‌ನಲ್ಲಿ ಕೇಂದ್ರದ ಮಹಿಳಾ ಸಿಬ್ಬಂದಿ ರಕ್ಷಾ ಬಂಧನ ಪ್ರಯುಕ್ತ ಸೋಂಕಿತರಿಗೆ ರಾಖಿ ಕಟ್ಟಿದರು.

ಕೇಂದ್ರದಲ್ಲಿ ಇರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಿಬ್ಬಂದಿ ವಿಜಯಕೃಷ್ಣ ಸೋಲಪುರ ಅವರಿಗೆ ಕೇಂದ್ರದ ಮೇಲ್ವಿಚಾರಕಿ ಡಾ. ನಿಶಾ ಫಾತಿಮಾ, ಮನ್ನಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಾಧಿಕಾರಿ ಶಕುಂತಲಾ ಶಿರೋಮಣಿ ಹಾಗೂ ಮೀನಾಕುಮಾರಿ ಸುನೀಲ ಅವರು ರಾಖಿ ಕಟ್ಟಿ ಶುಭ ಕೋರಿದರು.

ಕೇಂದ್ರದ ಭದ್ರತಾ ವ್ಯವಸ್ಥಾಪಕ ಅಬ್ದುಲ್ ವಾಜಿದ್, ಎಂ.ಡಿ. ಇರ್ಫಾನ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.