ADVERTISEMENT

ವಕೀಲರ ಸಂಘಕ್ಕೆ ಸಂಜೀವರೆಡ್ಡಿ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 3:40 IST
Last Updated 11 ಏಪ್ರಿಲ್ 2021, 3:40 IST
ಬಸವಕಲ್ಯಾಣ ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಗೊಂಡ ಸಂಜೀವರೆಡ್ಡಿ ಯರಬಾಗ ಹಾಗೂ ಇತರೆ ಪದಾಧಿಕಾರಿಗಳು ಶುಕ್ರವಾರ ಸಂಭ್ರಮಾಚರಿಸಿದರು
ಬಸವಕಲ್ಯಾಣ ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಗೊಂಡ ಸಂಜೀವರೆಡ್ಡಿ ಯರಬಾಗ ಹಾಗೂ ಇತರೆ ಪದಾಧಿಕಾರಿಗಳು ಶುಕ್ರವಾರ ಸಂಭ್ರಮಾಚರಿಸಿದರು   

ಬಸವಕಲ್ಯಾಣ: ತಾಲ್ಲೂಕು ವಕೀಲರ (ಬಾರ್ ಅಸೋಶಿಯೇಷನ್) ಸಂಘದ ಅಧ್ಯಕ್ಷರಾಗಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಸಂಜೀವರೆಡ್ಡಿ ಯರಬಾಗ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ವಿಜಯ ವಟಗೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಬಿ. ಮಾಶಾಳಕರ್ ಆಯ್ಕೆಗೊಂಡರು. ಇನ್ನುಳಿದ ಎರಡು ಸ್ಥಾನಗಳಾದ ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಜಿ.ಎಂ.ಸಾಗರ ಹಾಗೂ ಖಜಾಂಚಿಯಾಗಿ ಸುರೇಶ ಕಾಟೆ ಅವಿರೋಧವಾಗಿ ಆಯ್ಕೆಗೊಂಡರು ಎಂದು ಚುನಾವಣಾ ಅಧಿಕಾರಿ ಸೂರ್ಯಕಾಂತ ಗಾಯಕವಾಡ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT