ADVERTISEMENT

ಕೈದಿಗಳಿಗೆ ರಾಖಿ ಕಟ್ಟಿದ ಸಹೋದರಿಯರು

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 10:49 IST
Last Updated 10 ಆಗಸ್ಟ್ 2022, 10:49 IST
ಬೀದರ್‌ನ ಜಿಲ್ಲಾ ಕಾರಾಗೃಹದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪಾವನ ಧಾಮದ ಸಹೋದರಿಯರು ರಕ್ಷಾ ಬಂಧನ ಪ್ರಯುಕ್ತ ಕೈದಿಗಳಿಗೆ ರಾಖಿ ಕಟ್ಟಿದರು
ಬೀದರ್‌ನ ಜಿಲ್ಲಾ ಕಾರಾಗೃಹದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪಾವನ ಧಾಮದ ಸಹೋದರಿಯರು ರಕ್ಷಾ ಬಂಧನ ಪ್ರಯುಕ್ತ ಕೈದಿಗಳಿಗೆ ರಾಖಿ ಕಟ್ಟಿದರು   

ಬೀದರ್: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪಾವನ ಧಾನ ಕೇಂದ್ರದ ಸಹೋದರಿಯರು ಇಲ್ಲಿಯ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳಿಗೆ ರಾಖಿ ಕಟ್ಟಿ ರಕ್ಷಾ ಬಂಧನ ಆಚರಿಸಿದರು.
188 ಪುರುಷ ಕೈದಿಗಳು, 19 ಮಹಿಳಾ ಕೈದಿಗಳು ಹಾಗೂ ಇಬ್ಬರು ಮಕ್ಕಳಿಗೆ ರಾಖಿ ಕಟ್ಟಿ ಪ್ರಸಾದ ವಿತರಿಸಿದರು.
ಕೇಂದ್ರದ ಹಿರಿಯ ಪ್ರವರ್ತಕ ಪ್ರಭಾಕರ ಭಾಯಿ, ಗುರುದೇವಿ ಬಹೆನ್, ಕಾರಾಗೃಹದ ಅಧೀಕ್ಷಕ ಶರಣಬಸಪ್ಪ ಮಾತನಾಡಿದರು.
ಅಶೋಕಕುಮಾರ ಬಿರಾದಾರ, ಮಹಾನಂದ ಬಹೆನ್, ಉಷಾ ಬಹೆನ್, ರೇಣುಕಾ ಬಹೆನ್, ವೈಜಿನಾಥ ರಾಗಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.