ADVERTISEMENT

ಹೊಸಪೇಟೆ | ಕೆರೆ, ಹಳ್ಳಿಗಳಲ್ಲಿ ಈಜಾಟ ನಿಷೇಧ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 16:24 IST
Last Updated 20 ಜುಲೈ 2024, 16:24 IST
ಹುಮನಾಬಾದ್ ತಾಲ್ಲೂಕಿನ ಧುಮ್ಮನಸೂರ್ ತಾಂಡಾದಲ್ಲಿನ ಕೆರೆ ದಡದಲ್ಲಿ ಪೊಲೀಸರು ಈಜು ನಿಷೇಧದ ಫಲಕ ಅಳವಡಿಸಿರುವುದು
ಹುಮನಾಬಾದ್ ತಾಲ್ಲೂಕಿನ ಧುಮ್ಮನಸೂರ್ ತಾಂಡಾದಲ್ಲಿನ ಕೆರೆ ದಡದಲ್ಲಿ ಪೊಲೀಸರು ಈಜು ನಿಷೇಧದ ಫಲಕ ಅಳವಡಿಸಿರುವುದು   

ಹುಮನಾಬಾದ್: ಕೆರೆ ಹಳ್ಳಿಗಳಲ್ಲಿ ಈಜಾಡುವುದು ನಿಷೇಧಿಸಲಾಗಿದೆ ಎಂದು ಪೊಲೀಸರು ಕೆರೆಯ ದಡದಲ್ಲಿ ಶನಿವಾರ  ಫಲಕ ಅಳವಡಿಸಲಾಗಿದೆ.

ಈ ಕುರಿತು ಪಿಎಸ್ಐ ತಿಮ್ಮಯ್ಯ ಮಾತನಾಡಿ, ‘ಕಳೆದ ಎರಡು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಹಳ್ಳ ಕೆರೆಗಳಿಗೆ ನೀರಿನ ಹರಿವು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಈಜಾಡುವುದು ನಿಷೇಧಿಸಲಾಗಿದೆ. ಕೆರೆಗಳ ಸುತ್ತ ತಮ್ಮ ಜಾನುವಾರುಗಳು ಹೋಗದಂತೆ ನೋಡಿಕೊಳ್ಳಬೇಕು’ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಅಪರಾಧ ವಿಭಾಗದ ಪಿಎಸ್ಐ ಸುರೇಶ್ ಸೇರಿದಂತೆ ಇತರರು ಇದ್ದರು.

ADVERTISEMENT

ದಿನ ಪೂರ್ತಿ ಮಳೆ: ಹುಮನಾಬಾದ್ ಪಟ್ಟಣ ಸೇರಿದಂತೆ ತಾಲ್ಲೂಕಿನ ಹಳಿಖೇಡ್ ಬಿ., ದುಬಲಗುಂಡಿ, ಘೋಡವಾಡಿ, ಘಾಟಬೋರಾಳ್, ಹುಡಗಿ, ಮದರಗಾಂವ , ಮಾಣಿಕ್ ನಗರ ಗ್ರಾಮಗಳಲ್ಲಿ ದಿನ ಪೂರ್ತಿ ಮಳೆ ಸುರಿಯಿತು. ಶುಕ್ರವಾರ ರಾತ್ರಿಯಿಂದ ಆರಂಭವಾದ ಮಳೆ ಶನಿವಾರ ದಿನ ಪೂರ್ತಿ ಸುರಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.