ADVERTISEMENT

ಗುರು ನಾನಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2022, 15:24 IST
Last Updated 7 ಸೆಪ್ಟೆಂಬರ್ 2022, 15:24 IST
ಗುರು ನಾನಕ ಸಂಸ್ಥೆ ವತಿಯಿಂದ ಬೀದರ್‌ನ ಝಿರಾ ಕನ್ವೆನ್ಶನ್‌ ಹಾಲ್‍ನಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಕಿಯರು ‘ಪ್ಲಾಸ್ಟಿಕ್‌ ತ್ಯಜಿಸಿ, ಪೇಪರ್‌ ಬ್ಯಾಗ್ ಬಳಸಿ’ ಜಾಗೃತಿ ಮೂಡಿಸಲು ಪೇಪರ್‌ ಉಡುಗೆ ತೊಟ್ಟು ಗಮನ ಸೆಳೆದರು
ಗುರು ನಾನಕ ಸಂಸ್ಥೆ ವತಿಯಿಂದ ಬೀದರ್‌ನ ಝಿರಾ ಕನ್ವೆನ್ಶನ್‌ ಹಾಲ್‍ನಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಕಿಯರು ‘ಪ್ಲಾಸ್ಟಿಕ್‌ ತ್ಯಜಿಸಿ, ಪೇಪರ್‌ ಬ್ಯಾಗ್ ಬಳಸಿ’ ಜಾಗೃತಿ ಮೂಡಿಸಲು ಪೇಪರ್‌ ಉಡುಗೆ ತೊಟ್ಟು ಗಮನ ಸೆಳೆದರು   

ಬೀದರ್‌: ಗುರು ನಾನಕ ಸಂಸ್ಥೆ ವತಿಯಿಂದ ಝಿರಾ ಕನ್ವೆನ್ಶನ್‌ ಹಾಲ್‍ನಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ ಅಂಗವಾಗಿ ಶಿಕ್ಷಕರ ದಿನ ಆಚರಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಎಸ್.ಬಲಬೀರ ಸಿಂಗ್ ಅವರು ರಾಧಕೃಷ್ಣನ್‍ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಗುರು ನಾನಕ ಸಂಸ್ಥೆಯ ಉಪಾಧ್ಯಕ್ಷೆ ರೇಷ್ಮಾ ಕೌರ್ ಮಾತನಾಡಿ,‘ಶಿಕ್ಷಕರು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿ ವಿದ್ಯಾರ್ಥಿಗಳಲ್ಲಿ ಶಿಸ್ತು ಬೆಳೆಸಬೇಕು’ ಎಂದರು.

ADVERTISEMENT

ಈ ಸಂದರ್ಭದಲ್ಲಿ ಶಿಕ್ಷಕ-ಶಿಕ್ಷಕಿಯರಿಗಾಗಿ ವಿವಿಧ ಸ್ಪರ್ಧೆಗಳು ನಡೆದವು. ಶಿಕ್ಷಕ-ಶಿಕ್ಷಕಿಯರು ರಂಗೋಲಿ ಬಿಡಿಸಿ ರ್‍ಯಾಂಪ್‌ ವಾಕ್‌ ಮಾಡಿ ಗಮನ ಸೆಳೆದರು. ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಆಡಳಿತ ಮಂಡಳಿಯ ಸದಸ್ಯರು, ಸಂಸ್ಥೆಯ ಶಾಲಾ ಕಾಲೇಜುಗಳ ಪ್ರಾಚಾರ್ಯರು, ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.