ADVERTISEMENT

ಸಿದ್ಧಾರ್ಥ ಬೌದ್ಧ ವಿಹಾರದಲ್ಲಿ ಬುದ್ಧನ ಮೂರ್ತಿ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2021, 15:49 IST
Last Updated 26 ಸೆಪ್ಟೆಂಬರ್ 2021, 15:49 IST
ಬೀದರ್‌ನ ಬ್ಯಾಂಕ್‌ ಕಾಲೊನಿಯ ಸಿದ್ಧಾರ್ಥ ಬೌದ್ಧ ವಿಹಾರದ ಬುದ್ಧನ ಮೂರ್ತಿ ಸ್ಥಾಪನೆಗೆ ಪ್ರತಿಮೆಯನ್ನು ಮೆರವಣಿಗೆಯಲ್ಲಿ ತರಲಾಯಿತು
ಬೀದರ್‌ನ ಬ್ಯಾಂಕ್‌ ಕಾಲೊನಿಯ ಸಿದ್ಧಾರ್ಥ ಬೌದ್ಧ ವಿಹಾರದ ಬುದ್ಧನ ಮೂರ್ತಿ ಸ್ಥಾಪನೆಗೆ ಪ್ರತಿಮೆಯನ್ನು ಮೆರವಣಿಗೆಯಲ್ಲಿ ತರಲಾಯಿತು   

ಬೀದರ್: ಇಲ್ಲಿಯ ಬ್ಯಾಂಕ್‌ ಕಾಲೊನಿಯ ಸಿದ್ಧಾರ್ಥ ಬೌದ್ಧ ವಿಹಾರದಲ್ಲಿ ಬುದ್ಧನ ಮೂರ್ತಿ ಸ್ಥಾಪನೆ ಕಾರ್ಯಕ್ರಮ ಭಾನುವಾರ ನಡೆಯಿತು.

ಭಿಕ್ಕು ಸಂಘಗಳ ನೇತೃತ್ವದಲ್ಲಿ ನಾಗಶೇನಾ ಬುದ್ಧ ವಿಹಾರದಿಂದ ಬ್ಯಾಂಕ್ ಕಾಲೊನಿಯ ಸಿದ್ದಾರ್ಥ ಬೌದ್ಧ ವಿಹಾರ ವರೆಗೆ ಎರಡು ಬುದ್ಧನ ಮೂರ್ತಿಗಳನ್ನು ಮೆರವಣಿಗೆಯಲ್ಲಿ ತರಲಾಯಿತು.

ಮಹಾಥೇರೊ ಧಮ್ಮಾನಂದ ಭಂತೆ ಸಾನ್ನಿಧ್ಯ ವಹಿಸಿದ್ದರು. ನಂತರ ನಡೆದ ಕಾರ್ಯಕ್ರಮದಲ್ಲಿ ಧಮ್ಮ ಕೀರ್ತಿ ಭಂತೆ, ಧಮ್ಮದೀಪ ಭಂತೆ, ರೇಕುಳಗಿಯ ಭೋದಿ ಧಮ್ಮ ಧಮ್ಮಪಾಲ ಭಂತೆ ಪ್ರವಚನ ನೀಡಿದರು.

ADVERTISEMENT

ಸಂಘಜ್ಯೋತಿ ಭಂತೆ, ರಾಹುಲ್ ಭಂತೆ, ಜ್ಞಾನಸಾಗರ ಭಂತೆ, ಶೋಭಾ ರಾಜೇಶೇಖರ ಜಂಜೀರೆ, ಅಂಜನಾದೇವಿ ದರ್ಗಾ, ಜೈಯಶ್ರೀ ಮೇಟಿ, ರೂಪಾ ಉಜನಿಕರ್, ಪುಷ್ಪವತಿ ಕೊಟಾರೆ, ರೇಣುಕಾ ಹುಮನಾಬಾದೆ, ಪುನಿತಾ ಗಾಯಕವಾಡ, ಭಾಗ್ಯವತಿ ಸುನೀಲ ಅಮಲಾಪೂರಕರ್, ಮಲ್ಲಮ್ಮ ಬಾಬುರಾವ್ ಹೊಸಮನಿ ಅವರು ಬುದ್ಧನ ಕಂಚಿನ ಪ್ರತಿಮೆ ದಾನ ನೀಡಿದರು.

ಛಲವಾದಿ ಮಹಾಸಭಾದ ಅಧ್ಯಕ್ಷ ಪ್ರದೀಪ ಜಂಜಿರೆ ಸೇರಿದಂತೆ ವಿವಿಧ ಸಂಘಟನೆಗಳ ಮುಖಡರು, ಗಣಪತರಾವ್ ಗಾಯಕವಾಡ, ಶಂಭುಸಾಗರ, ನಾಗನಾಥ ನಿಡೊದಕರ್, ವೀರಣ್ಣ ಚಂದನ್, ಗಣಪತಿ ದೀನೆ, ಭೀಮರಾವ್ ಸಂಗಮ್, ಕುಂದನ್ ಶಾಮರಾವ್, ಬಾಬುರಾವ್ ಹಸನ್‌ಕರ್, ಬಾಬುರಾವ್ ಹೊಸಮನಿ, ಪುಷ್ಪಾ, ಸವಿತ್ರಾಬಾಯಿ, ಪಷ್ಪಾವತಿ, ಕಮಲಾ ಪಾಲ್ಗೊಂಡಿದ್ದರು.

ಸಿದ್ದಾರ್ಥ ಬೌದ್ಧ ವಿಹಾರದ ಅಧ್ಯಕ್ಷ ಭೀಮಣ್ಣಾ ಭಾವಿಕಾಟ್ಟಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.