ADVERTISEMENT

ಮುಸ್ಲಿಂ ಯುವಕರಿಂದ ಹಿಂದೂ ವ್ಯಕ್ತಿಯ ಅಂತ್ಯಸಂಸ್ಕಾರ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2021, 3:39 IST
Last Updated 27 ಏಪ್ರಿಲ್ 2021, 3:39 IST
ಬಸವಕಲ್ಯಾಣದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲು ಹಿಂದೂ ವ್ಯಕ್ತಿಯ ಶವವನ್ನು ಮುಸ್ಲಿಂ ಯುವಕರು ಸಾಗಿಸಿದರು
ಬಸವಕಲ್ಯಾಣದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲು ಹಿಂದೂ ವ್ಯಕ್ತಿಯ ಶವವನ್ನು ಮುಸ್ಲಿಂ ಯುವಕರು ಸಾಗಿಸಿದರು   

ಬಸವಕಲ್ಯಾಣ (ಬೀದರ್‌ ಜಿಲ್ಲೆ): ಇಲ್ಲಿನ ಶಹಾನಗರ ನಿವಾಸಿ ಯಾದವರಾವ್ (55) ಎನ್ನುವವರ ಅಂತ್ಯಸಂಸ್ಕಾರವನ್ನು ಭಾನುವಾರ ಅದೇ ಓಣಿಯ ಮುಸ್ಲಿಂ ಯುವಕರು ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.

ಯಾದವರಾವ್ ಅವರು ಮನೆಯಲ್ಲಿ ಮಲಗಿದಲ್ಲೇ ಪ್ರಾಣ ಬಿಟ್ಟಿದ್ದರು. ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ. ಕೋವಿಡ್ ಭಯದಿಂದ ಅಂತ್ಯ ಸಂಸ್ಕಾರಕ್ಕೆ ಓಣಿ ಜನರು ಬಾರದಿದ್ದಾಗ ಮುಸ್ಲಿಂ ಯುವಕರು ಶವವನ್ನು ವಾಹನದಲ್ಲಿ ಸಾಗಿಸಿ ಖಾನಾಪುರ ರಸ್ತೆಯಲ್ಲಿನ ಹಿಂದೂ ಸಮುದಾಯದ ಸ್ಮಶಾನದಲ್ಲಿ ಶವಸಂಸ್ಕಾರ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT