ADVERTISEMENT

ಉದ್ಯಾನಕ್ಕೆ ಶ್ಯಾಮಪ್ರಸಾದ್ ಮುಖರ್ಜಿ ಹೆಸರು

​ಪ್ರಜಾವಾಣಿ ವಾರ್ತೆ
Published 6 ಜುಲೈ 2022, 15:20 IST
Last Updated 6 ಜುಲೈ 2022, 15:20 IST
ಬೀದರ್‌ನ ನಾಗಶೆಟ್ಟಿ ಕರ್ಪೂರ ಬಡಾವಣೆ ಉದ್ಯಾನವನಕ್ಕೆ ಶ್ಯಾಮಪ್ರಸಾದ್ ಮುಖರ್ಜಿ ಹೆಸರಿಡುವ ಕಾರ್ಯಕ್ರಮವನ್ನು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್ ಮತ್ತು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ ಉದ್ಘಾಟಿಸಿದರು
ಬೀದರ್‌ನ ನಾಗಶೆಟ್ಟಿ ಕರ್ಪೂರ ಬಡಾವಣೆ ಉದ್ಯಾನವನಕ್ಕೆ ಶ್ಯಾಮಪ್ರಸಾದ್ ಮುಖರ್ಜಿ ಹೆಸರಿಡುವ ಕಾರ್ಯಕ್ರಮವನ್ನು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್ ಮತ್ತು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ ಉದ್ಘಾಟಿಸಿದರು   

ಬೀದರ್‌: ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸ್ವಾತಂತ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಮತ್ತು ಭಾರತೀಯ ಜನ ಸಂಘದ ಸ್ಥಾಪಕ ಶ್ಯಾಮಪ್ರಸಾದ್ ಮುಖರ್ಜಿ ಜನ್ಮದಿನದ ಪ್ರಯುಕ್ತ ನಗರದ ನಾಗಶೆಟ್ಟಿ ಕರ್ಪೂರ ಬಡಾವಣೆಯ ಉದ್ಯಾನಕ್ಕೆ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ನಾಮಕರಣ ಮಾಡಲಾಯಿತು.

ಉದ್ಯಾನದಲ್ಲಿ ಪ್ರತಿಷ್ಠಾಪಿಸಲಾದ ಶ್ಯಾಮಪ್ರಸಾದ್ ಮುಖರ್ಜಿ ಪ್ರತಿಮೆಯನ್ನು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್ ಮತ್ತು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ ಉದ್ಘಾಟಿಸಿದರು.

ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ವಿಶ್ವನಾಥ ಪಾಟೀಲ ಮಾಡಗೋಳ್, ಪ್ರಕಾಶ ಟೊಣ್ಣೆ, ಬಾಬುರಾವ್ ಮದಕಟ್ಟಿ, ಮಲ್ಲಿಕಾರ್ಜುನ್ ಕುಂಬಾರ, ವಿಜಯಕುಮಾರ ಪಾಟೀಲ ಗಾದಗಿ, ಬೀದರ್ ನಗರ ಮಂಡಲ ಅಧ್ಯಕ್ಷ ಶಶಿ ಹೊಸಳ್ಳಿ, ನಗರಸಭೆ ಸದಸ್ಯ ರಾಜರಾಮ ಚಿಟ್ಟಾ, ಪ್ರಮುಖರಾದ ಬಾಬುರಾವ್ ಕಾರಬಾರಿ, ಜಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶಕುಂತಲಾ ಬೆಲ್ದಾಳೆ, ಗುರುನಾಥ ಕೊಳ್ಳುರ್, ಮಹಾನಂದಾ ಪಾಟೀಲ, ಪ್ರಮುಖರಾದ ಸೋಮನಾಥ ಪಾಟೀಲ ಗಾದಗಿ, ಹಾವಶೆಟ್ಟಿ ಪಾಟೀಲ, ರವಿ ಮೂಲಗೆ, ಬಿಜೆಪಿ ಸಚಿದಾನಂದ ಚಿದ್ರಿ, ಜಗದೀಶಚಂದ್ರ ಸ್ವಾಮಿ, ಶರಣಪ್ಪ ಕರ್ಪೂರ, ಆಕಾಶ ಕರ್ಪೂರ ಇದ್ದರು.

ADVERTISEMENT

ನಿತಿನ್ ಕರ್ಪೂರ ಸ್ವಾಗತಿಸಿದರು. ಶಶಿಧರ ಆನಂದ ಮಠ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.