ಭಾಲ್ಕಿ: ಇಲ್ಲಿಯ ನಗರ ಪೊಲೀಸ್ ಠಾಣೆಯ ಪೊಲೀಸರು ಕೆಲ ದಿನಗಳ ಹಿಂದೆ ಪಟ್ಟಣದ ವಿವಿಧ ಭಾಗಗಳಲ್ಲಿ ಕಳ್ಳತನವಾದ ದನಗಳ ಕಳ್ಳರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಡಿವೈಎಸ್ಪಿ ವೆಂಕನಗೌಡ ಪಾಟೀಲ ಅವರ ಮಾರ್ಗದರ್ಶನದಲ್ಲಿ ಸಿಪಿಐ ರಮೇಶಕುಮಾರ ಮೈಲೂರಕರ್ ನೇತೃತ್ವದ ತಂಡ ದನಗಳ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶನಿವಾರ ನಸುಕಿನ ಜಾವ ಆರೋಪಿಗಳಾದ ಉದಗೀರ್ನ ಕಿರಣ ವೈಜಿನಾಥ, ಕಿಶೋರ ಸಕಾರಾಮ ಕಾಂಬಳೆ ಮತ್ತು ಭಾಲ್ಕಿಯ ಅಶೋಕ ಕಾಶಿನಾಥ ಮುದಾಳೆ, ಕಿರಣ ಸುಮಂತ ಗಾಯಕವಾಡ ಟಾಟಾ ಎಸಿ ವಾಹನದಲ್ಲಿ 03 ಆಕಳುಗಳನ್ನು ಕಳುವು ಮಾಡಿ ಸಾಗಾಟ ಮಾಡುತ್ತಿರುವುದರ ಖಚಿತ ಮಾಹಿತಿ ಮೇರೆಗೆ ಅಂಬೇಡ್ಕರ್ ಸರ್ಕಲ್ ಹತ್ತಿರ ಕಳ್ಳರನ್ನು ಬಂಧಿಸಿ, ಅವರಿಂದ ನಗದು ₹25 ಸಾವಿರ ವಶಪಡಿಸಿಕೊಂಡಿದ್ದಾರೆ. ನಂತರ ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಪಿಎಸ್ಐ ಎಸ್.ಎಲ್.ಪಾಟೀಲ್, ಎಎಸ್ಐ ಮಾಣಿಕಪ್ಪ, ಎಚ್.ಸಿ.ಉಮಾಕಾಂತ ದಾನಾ, ಪೇದೆಗಳಾದ ರಮೇಶಕುಮಾರ ಮೇತ್ರೆ, ನಾಗಪ್ಪ ಖೇಡ, ಉತ್ತಮ, ಸಚಿನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.