ಬೀದರ್: ಸಂಚಾರ ನಿಯಮ ಉಲ್ಲಂಘಿಸಿದ ದ್ವಿಚಕ್ರ ವಾಹನ ಚಾಲಕನ ಪತ್ನಿ ಗ್ರಹರಕ್ಷಕ ದಳದ ಸಿಬ್ಬಂದಿಮೇಲೆ ಹಲ್ಕೆ ನಡೆಸಿ ಘಟನೆ ಇಲ್ಲಿಯ ಅಂಬೇಡ್ಕರ್ ಸರ್ಕಲ್ ಬಳಿ ಮಂಗಳವಾರ ನಡೆದಿದೆ.
ಪೊಲೀಸರು ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳನ್ನು ತಡೆದು ಪ್ರಕರಣ ದಾಖಲಿಸಿ ಅಧಿಕ ಮೊತ್ರದ ದಂಡ ವಿಧಿಸುತ್ತಿದ್ದರು.
ಇದೇ ವೇಳೆಯಲ್ಲಿ ಬೈಕ್ ಮೇಲೆ ಅಲ್ಲಿಗೆ ಬಂದಿದ್ದಾರೆ. ಹೋಮ್ ಗಾರ್ಡ್ ಅವರನ್ನು ತಡೆಯಲು ಯತ್ನಿದರು. ವಾಹನ ನಿಲ್ಲಿಸದಿದ್ದಾಗ ಹಿಂದಿನಿಂದ ಜಗ್ಗಿ ಹಿಡಿದಿದ್ದಾರೆ. ಹೀಗಾಗಿ ಚಾಲಕನ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ.
ಇದರಿಂದ ಕುಪಿತಗೊಂಡ ಬೈಕ್ ಸವಾರನ ಪತ್ನಿ ಹೋಮ್ ಗಾರ್ಡ್ ಕೆನ್ನೆಗೆ ಹೊಡೆದಿದ್ದಾರೆ. ಸಾರ್ವಜನಿಕರು ಸಹ ಪೊಲೀಸರಮೇಲೆ ಧಾವಿಸಿ ಹೋಗಿದ್ದಾರೆ. ಪರಿಸ್ಥಿತಿ ಗಂಭೀರ ಸ್ವರೂಪ ಪಡೆಯುತ್ತಿರುವುದನ್ನು ಅರಿತ ಪೊಲೀಸರು ಅಲ್ಲಿಂದ ಹೊರಟಿದ್ದಾರೆ.ಈ ಗೊಂದಲದಿಂದಾಗಿ ಕೆಲ ಹೊತ್ತು ಸಂಚಾರ ಸ್ಥಗಿತಗೊಂಡಿತ್ತು.
ಈ ದ್ರಶ್ಯವನ್ನು ಕೆಲವರು ಮೊಬೈಲ್ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ. ವಿಡಿಯೊ ಎಲ್ಲಡೆ ವೈರಲ್ ಆಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.