ಭಾಲ್ಕಿ: ತಾಲ್ಲೂಕಿನ ಮೋರಂಬಿ ಗ್ರಾಮದ ಶರಣಬಸವೇಶ್ವರ ದೇವಾಲಯದಲ್ಲಿ ನಡೆದ 53ನೇ ವರ್ಷದ ಸೀಗೆ ಹುಣ್ಣಿಮೆ ಸಂಭ್ರಮ, ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಕಲಬುರಗಿ ಶರಣ ಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ‘ಮೋರಂಬಿ ಶರಣಬಸವೇಶ್ವರ ದೇವಸ್ಥಾನಕ್ಕೆ ಭಕ್ತರು ಆಸರೆಯಾಗಿದ್ದಾರೆ. ಶರಣ ಮಹದೇವಪ್ಪ ಗುಂದಗಿ ಅವರ ಸತ್ಯ ಸಂಕಲ್ಪದಂತೆ 52 ವರ್ಷಗಳಿಂದ ಸುಮಂಗಲೆಯರ ಉಡಿ ತುಂಬುವ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದು ಪ್ರಶಂಸನೀಯ ಕಾರ್ಯವಾಗಿದೆ’ ಎಂದು ತಿಳಿಸಿದರು.
ತಾ.ಪಂ.ಮಾಜಿ ಅಧ್ಯಕ್ಷೆ ರೇಖಾ ವಿಲಾಸ ಪಾಟೀಲ, ಅಶ್ವಿನಿ ಶರಣು ಅಷ್ಟೂರೆ ಮಾತನಾಡಿದರು.
ಡಾ.ಗೀತಾ ಈಶ್ವರ ಖಂಡ್ರೆ ಅವರಿಗೆ ನಿರಂತರ ದಾಸೋಹ ಭವನ ನಿರ್ಮಿಸಲು ಶರಣ ಬಸವೇಶ್ವರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಿದ್ರಾಮಪ್ಪ ಗುಂದಗಿ ಮನವಿ ಪತ್ರ ಸಲ್ಲಿಸಿದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮೆರೆದ ಪ್ರಮುಖರಾದ ರೂಪಾ ಸಿದ್ರಾಮಯ್ಯ ಸ್ವಾಮಿ, ನಿರ್ಮಲಾ ಮೈನಾಳೆ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು. ವಿದ್ಯಾವತಿ ಅಷ್ಟೂರೆ, ಶಿಲ್ಪಾ ಶಿವಾನಂದ ಪವಾಡಶೆಟ್ಟಿ, ಕಸ್ತೂರಬಾಯಿ ಕರಡೇ, ಶೋಭಾವತಿ ಧಾಬಶೆಟ್ಟಿ, ಮಲ್ಲಿಕಾರ್ಜುನ ಸ್ವಾಮಿ, ಕಾವೇರಿ ಸಜ್ಜನಶೆಟ್ಟಿ, ಸವಿತಾ ಅಶೋಕ ಲದ್ದೆ, ರೇಖಾ ಸಂಜೀವ ಸೇರಿದಂತೆ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.