ಬೀದರ್: ನಗರದ ಬ್ಯಾಂಕ್ ಕೊಲೊನಿಯ ಸಿದ್ಧಾರ್ಥ ಬೌದ್ಧ ವಿಹಾರ ಸಮಿತಿ ವತಿಯಿಂದ ಮೂರು ತಿಂಗಳ ವರೆಗೆ ನಡೆದ ವರ್ಷಾವಾಸ ಸಮಾರೋಪ ಕಾರ್ಯಕ್ರಮ ನಡೆಯಿತು.
ನಗರಸಭೆ ಸದಸ್ಯ ಪ್ರಭುಶೆಟ್ಟಿ ಪಾಟೀಲ ಉದ್ಘಾಟಿಸಿದರು. ಅತಿಥಿಗಳಾಗಿ ನಗರಸಭೆ ಸದಸ್ಯ ದಿಗಂಬರ್ ಮಡಿವಾಳ, ಕಾಂಗ್ರೆಸ್ ಮುಖಂಡ ಧನರಾಜ ಹಂಗರಗಿ, ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷೆ ಲುಂಬಣಿ ಗೌತಮ,
ಉಪನ್ಯಾಸಕರಾಗಿ ಶಿವಶರಣಪ್ಪ ಹುಗ್ಗಿ ಪಾಟೀಲ, ಡಾ.ಕಾಶೀನಾಥ ಚಲ್ವಾ ಪಾಲ್ಗೊಂಡಿದ್ದರು.
ಪೂಜ್ಯ ಭಂತೆ ಜ್ಞಾನಸಾಗರ, ಭಂತೆ ವರಜ್ಯೋತಿ ಮತ್ತು ಭಂತೆ ಸಂಘರಕ್ಕಿತ ಸಾನಿಧ್ಯ ವಹಿಸಿದ್ದರು. ಭೀಮಣ್ಣ ಭಾವಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಶಂಭುರಾವ್ ಸಾಗರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌತಮ ಚಕ್ರವರ್ತಿ ನಿರೂಪಿಸಿದರು. ರಂಗಮ್ಮ ಕಡ್ಡೆ ಸ್ವಾಗತಿಸಿದರು. ಗೋರಖನಾಥ ಸದಾಫುಲೆ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.