ADVERTISEMENT

ವರ್ಷಾವಾಸ ಸಮಾರೋಪ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2021, 15:01 IST
Last Updated 2 ನವೆಂಬರ್ 2021, 15:01 IST
ಬೀದರ್‌ನ ಬ್ಯಾಂಕ್‌ ಕೊಲೊನಿಯ ಸಿದ್ಧಾರ್ಥ ಬೌದ್ಧ ವಿಹಾರ ಸಮಿತಿ ವತಿಯಿಂದ ಆಯೋಜಿಸಿದ್ದ ವರ್ಷಾವಾಸ ಸಮಾರೋಪ ಸಮಾರಂಭದಲ್ಲಿ ನಗರಸಭೆ ಸದಸ್ಯ ಪ್ರಭುಶೆಟ್ಟಿ ಪಾಟೀಲ, ದಿಗಂಬರ್ ಮಡಿವಾಳ, ಧನರಾಜ್ ಹಂಗರಗಿ, ಲುಂಬಣಿ ಗೌತಮ. ಪೂಜ್ಯ ಭಂತೆ ಜ್ಞಾನಸಾಗರ, ಭಂತೆ ವರಜ್ಯೋತಿ ಮತ್ತು ಭಂತೆ ಸಂಘರಕ್ಕಿತ ಇದ್ದರು
ಬೀದರ್‌ನ ಬ್ಯಾಂಕ್‌ ಕೊಲೊನಿಯ ಸಿದ್ಧಾರ್ಥ ಬೌದ್ಧ ವಿಹಾರ ಸಮಿತಿ ವತಿಯಿಂದ ಆಯೋಜಿಸಿದ್ದ ವರ್ಷಾವಾಸ ಸಮಾರೋಪ ಸಮಾರಂಭದಲ್ಲಿ ನಗರಸಭೆ ಸದಸ್ಯ ಪ್ರಭುಶೆಟ್ಟಿ ಪಾಟೀಲ, ದಿಗಂಬರ್ ಮಡಿವಾಳ, ಧನರಾಜ್ ಹಂಗರಗಿ, ಲುಂಬಣಿ ಗೌತಮ. ಪೂಜ್ಯ ಭಂತೆ ಜ್ಞಾನಸಾಗರ, ಭಂತೆ ವರಜ್ಯೋತಿ ಮತ್ತು ಭಂತೆ ಸಂಘರಕ್ಕಿತ ಇದ್ದರು   

ಬೀದರ್‌: ನಗರದ ಬ್ಯಾಂಕ್‌ ಕೊಲೊನಿಯ ಸಿದ್ಧಾರ್ಥ ಬೌದ್ಧ ವಿಹಾರ ಸಮಿತಿ ವತಿಯಿಂದ ಮೂರು ತಿಂಗಳ ವರೆಗೆ ನಡೆದ ವರ್ಷಾವಾಸ ಸಮಾರೋಪ ಕಾರ್ಯಕ್ರಮ ನಡೆಯಿತು.

ನಗರಸಭೆ ಸದಸ್ಯ ಪ್ರಭುಶೆಟ್ಟಿ ಪಾಟೀಲ ಉದ್ಘಾಟಿಸಿದರು. ಅತಿಥಿಗಳಾಗಿ ನಗರಸಭೆ ಸದಸ್ಯ ದಿಗಂಬರ್ ಮಡಿವಾಳ, ಕಾಂಗ್ರೆಸ್‌ ಮುಖಂಡ ಧನರಾಜ ಹಂಗರಗಿ, ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷೆ ಲುಂಬಣಿ ಗೌತಮ,
ಉಪನ್ಯಾಸಕರಾಗಿ ಶಿವಶರಣಪ್ಪ ಹುಗ್ಗಿ ಪಾಟೀಲ, ಡಾ.ಕಾಶೀನಾಥ ಚಲ್ವಾ ಪಾಲ್ಗೊಂಡಿದ್ದರು.

ಪೂಜ್ಯ ಭಂತೆ ಜ್ಞಾನಸಾಗರ, ಭಂತೆ ವರಜ್ಯೋತಿ ಮತ್ತು ಭಂತೆ ಸಂಘರಕ್ಕಿತ ಸಾನಿಧ್ಯ ವಹಿಸಿದ್ದರು. ಭೀಮಣ್ಣ ಭಾವಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು.

ADVERTISEMENT

ಶಂಭುರಾವ್ ಸಾಗರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌತಮ ಚಕ್ರವರ್ತಿ ನಿರೂಪಿಸಿದರು. ರಂಗಮ್ಮ ಕಡ್ಡೆ ಸ್ವಾಗತಿಸಿದರು. ಗೋರಖನಾಥ ಸದಾಫುಲೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.