ಬೀದರ್: ಇಲ್ಲಿನ ಮೈಲೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ವೈಜಿನಾಥ ಅಣೆಪ್ಪ ಗಾದಗಿ ಹಾಗೂ ಉಪಾಧಕ್ಷರಾಗಿ ಈಶ್ವರ ಮುಲ್ತಾನಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ವೈಜಿನಾಥ ಅಣೆಪ್ಪ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಈಶ್ವರ ಮುಲ್ತಾನಿ ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಸುಜ್ಞಾನಿ ಅವಿರೋಧ ಆಯ್ಕೆ ಎಂದು ಘೋಷಿಸಿದರು.
ಮುಖಂಡರಾದ ಉದಯಕುಮಾರ ತೋರಣ, ಜೋಸೆಫ್ ಕೊಡ್ಡಿಕರ್, ಶಶಿ ಹೊಸಳ್ಳಿ, ವಿಜಯಕುಮಾರ ಆನಂದೆ, ಅಶೋಕ ದಿಡಗೆ, ವಿಶ್ವನಾಥ ಉಂಡೆ, ಶಂಕರ ಪಾಟೀಲ, ಪ್ರಭು ಪಾಟೀಲ ಗಾದಗಿ, ಬಸು ಸುಲ್ತಾನಪೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.