ADVERTISEMENT

72 ಜನರಿಂದ ಸ್ವಯಂ ಪ್ರೇರಿತ ರಕ್ತದಾನ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2023, 12:27 IST
Last Updated 25 ಮಾರ್ಚ್ 2023, 12:27 IST
ಮಹಾಕಾಳಿ ಸರಾಫ್ ಮತ್ತು ಸುವರ್ಣಕಾರ ಅಸೋಸಿಯೇಷನ್ ಬೆಳ್ಳಿ ಹಬ್ಬದ ನಿಮಿತ್ತ ಬೀದರ್‍ನ ಖಾದಿ ಭಂಡಾರ ಕಾಂಪ್ಲೆಕ್ಸ್‍ನಲ್ಲಿ ರಕ್ತದಾನ ಶಿಬಿರ ನಡೆಯಿತು
ಮಹಾಕಾಳಿ ಸರಾಫ್ ಮತ್ತು ಸುವರ್ಣಕಾರ ಅಸೋಸಿಯೇಷನ್ ಬೆಳ್ಳಿ ಹಬ್ಬದ ನಿಮಿತ್ತ ಬೀದರ್‍ನ ಖಾದಿ ಭಂಡಾರ ಕಾಂಪ್ಲೆಕ್ಸ್‍ನಲ್ಲಿ ರಕ್ತದಾನ ಶಿಬಿರ ನಡೆಯಿತು   

ಬೀದರ್: ಮಹಾಕಾಳಿ ಸರಾಫ್ ಮತ್ತು ಸುವರ್ಣಕಾರ ಅಸೋಸಿಯೇಷನ್ ಬೆಳ್ಳಿ ಹಬ್ಬದ ಪ್ರಯುಕ್ತ ಇಲ್ಲಿಯ ಖಾದಿ ಭಂಡಾರ ಕಾಂಪ್ಲೆಕ್ಸ್‍ನಲ್ಲಿ ಹಮ್ಮಿಕೊಂಡಿದ್ದ ಶಿಬಿರದಲ್ಲಿ 72 ಜನ ಸ್ವಯಂ ಪ್ರೇರಿತ ರಕ್ತದಾನ ಮಾಡಿದರು.

ಅಸೋಸಿಯೇಷನ್ ಬೆಳ್ಳಿ ಹಬ್ಬ ಅರ್ಥಪೂರ್ಣವಾಗಿಸುವ ದಿಸೆಯಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಅಸೋಸಿಯೇಷನ್ ಪದಾಧಿಕಾರಿಗಳು, ವ್ಯಾಪಾರಿಗಳು ಹಾಗೂ ಯುವಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಸುನೀಲ್ ಮೊಟ್ಟಿ ತಿಳಿಸಿದರು.

ಅಸೋಸಿಯೇಷನ್ ಉಪಾಧ್ಯಕ್ಷರಾದ ಅನಿಲಕುಮಾರ ಬಿರಾದಾರ, ಕಾರ್ಯದರ್ಶಿ ರವೀಂದ್ರ ಬಿರಾದಾರ, ರಮೇಶ ಶಿವಶರಣಪ್ಪ, ಸಂಜು ಕುಂಬಾರವಾಡ, ನಿಜಗುಣಿ ಶಹಾಪುರೆ, ಸಚಿನ್, ವಸಂತ ಕುಲಕರ್ಣಿ, ಸೌರಭ ಮೊಟ್ಟಿ, ಸಾಗರ್ ಮಾಶೆಟ್ಟಿ ಮತ್ತಿತರರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.