ಬೀದರ್: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 78ನೇ ಜನ್ಮದಿನದ ಅಂಗವಾಗಿ ತಮಿಳುನಾಡಿನಿಂದ ಆರಂಭವಾದ ರಾಜೀವ್ ಗಾಂಧಿ ಜ್ಯೋತಿ ಯಾತ್ರೆ ಶುಕ್ರವಾರ ಬೀದರ್ಗೆ ತಲುಪಿತು.
ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ನಗರದಲ್ಲಿ ಯಾತ್ರೆಗೆ ಸ್ವಾಗತಿಸಿ ಬರಮಾಡಿಕೊಂಡರು.
ಕಾಂಗ್ರೆಸ್ ಹಿರಿಯ ಮುಖಂಡ ವೆಂಕಟರಾಮರೆಡ್ಡಿ, ಮಾಣಿಕಯ್ಯ ರೆಡ್ಡಿ, ಗೋಮರೀಜಿನ್ ಅಯ್ಯರ್, ಸುಶೀಲಾ, ದರೈವೆಲ್, ಶಂಕರ ದೊಡ್ಡಿ, ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ, ಪರ್ವೇಜ್ ಕಮಲ್, ಡಿ.ಕೆ. ಸಂಜುಕುಮಾರ, ಸುನೀಲ್ ಬಚ್ಚನ್, ಗೋವರ್ಧನ್ ರಾಠೋಡ್, ಶಂಕರ ರೆಡ್ಡಿ ಚಿಟ್ಟಾ ಇದ್ದರು.
ಸ್ವಾಗತ ಕಾರ್ಯಕ್ರಮದ ನಂತರ ಯಾತ್ರೆ ಬೀದರ್ನಿಂದ ಹೈದರಾಬಾದ್ ಕಡೆಗೆ ಸಾಗಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.