ಚಾಮರಾಜನಗರ: ಜಿಲ್ಲೆಯಲ್ಲಿ ಶುಕ್ರವಾರ ಸಾಧಾರಣ ಮಳೆ ಸುರಿಯಿತು. ಮಳೆಗೂ ಮುನ್ನ ಬೀಸಿದ ಬಿರುಗಾಳಿ ಇಡೀ ನಗರದಲ್ಲಿ ದೂಳೆಬ್ಬಿಸಿತು.
ಬಿ.ರಾಚಯ್ಯ ಜೋಡಿ ರಸ್ತೆ ಸೇರಿದಂತೆ ನಗರದ ಹಲವು ರಸ್ತೆಗಳಲ್ಲಿ ದಾರಿಯೇ ಕಾಣದಂತಹ ವಾತಾವರಣ ಕಂಡು ಬಂತು. ಗಂಟೆಗೆ 25 ಕಿ.ಮೀ ಗೂ ಅಧಿಕ ವೇಗದಲ್ಲಿ ಗಾಳಿ ಬೀಸಿತು.
ಮಳೆ ವಿವರ: ಮಲೆಮಹದೇಶ್ವರ ಬೆಟ್ಟ 29 ಮಿ.ಮೀ, ಕೊಳ್ಳೇಗಾಲ ತಾಲ್ಲೂಕು ಕಣ್ಣೂರು 7 ಮಿ.ಮೀ, ಚಾಮರಾಜನಗರ ಪುಣುಜನೂರು 5, ಕಾಗಲವಾಡಿ 4 ಮಿ.ಮೀ, ಅಟ್ಟುಗೂಳಿಪುರ 3 ಮಿ.ಮೀ ಮಳೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.