ಕೊಳ್ಳೇಗಾಲ: ತಮಿಳುನಾಡಿಗೆ ಮಾರಾಟಕ್ಕೆ ಮುಸುಕಿನ ಜೋಳ ಒಯ್ದಿದ್ದ ಲಾರಿ ಚಾಲಕ, ಕನ್ನಡಿಗ ಮಹೇಶ್ ಮೇಲೆ ಹಲ್ಲೆ ನಡೆದಿದೆ. ಆರು ಜನರಿದ್ದ ತಂಡ ಪೆಟ್ರೊಲ್ ಎರಚಿ ಬೆಂಕಿ ಹಚ್ಚಿದೆ.
ಗಾಯಗೊಂಡಿರುವ ಕೊಳ್ಳೇಗಾಲ ತಾಲ್ಲೂಕು ರಾಮಾಪುರ ಬಳಿಯ ಗೋಪಿಶೆಟ್ಟಿಯೂರು ನಿವಾಸಿ ಮಹೇಶ್ (28) ಈಗ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಮಿಳುನಾಡಿನ ಅಂದಿಯೂರು ಬಳಿ ಸೋಮವಾರ 6 ಜನರ ತಂಡ ಲಾರಿ ಅಡ್ಡಗಟ್ಟಿದೆ. ಲಾರಿಗೆ ಚೆಂಕಿಹಚ್ಚಿದ್ದು, ಮಹೇಶ್ ಮೇಲೂ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದೆ. ಸಕಾಲಕ್ಕೆ ಸ್ಥಳಕ್ಕೆ ಬಂದ ಪೊಲೀಸರು ರಕ್ಷಣೆ ಮಾಡಿದ್ದಾರೆ. ಚಾಲಕನ ಕಾಲು, ಕೈ ಹಾಗೂ ಎದೆಭಾಗದಲ್ಲಿ ಸುಟ್ಟ ಗಾಯಗಳಾಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.