ADVERTISEMENT

ಚಾಮರಾಜನಗರ: ಕರಡಿ ದಾಳಿಗೆ ವ್ಯಕ್ತಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2020, 16:46 IST
Last Updated 2 ಏಪ್ರಿಲ್ 2020, 16:46 IST
ಗುಂಡ್ಲುಪೇಟೆ ತಾಲ್ಲೂಕಿನ ಹಿರಿಕಾಟಿ ಬಳಿ ಕರಡಿ ದಾಳಿಯಿಂದ ನಾಗಯ್ಯ ಗಾಯಗೊಂಡಿದ್ದಾರೆ
ಗುಂಡ್ಲುಪೇಟೆ ತಾಲ್ಲೂಕಿನ ಹಿರಿಕಾಟಿ ಬಳಿ ಕರಡಿ ದಾಳಿಯಿಂದ ನಾಗಯ್ಯ ಗಾಯಗೊಂಡಿದ್ದಾರೆ   

ಗುಂಡ್ಲುಪೇಟೆ: ತಾಲ್ಲೂಕಿನ ಹಿರಿಕಾಟಿ ಗೇಟ್ ಬಳಿ ಗ್ರಾಮದ ನಾಗಯ್ಯ (45) ಎಂಬುವರ ಮೇಲೆ ಕರಡಿ ದಾಳಿ ಮಾಡಿ ಗಾಯ ಗೊಳಿಸಿದೆ. ಗಾಯಾಳುವನ್ನು ಮೈಸೂರಿನ ಆಸ್ಪತ್ರೆಗೆ ಕಳುಹಿಸ ಲಾಗಿದೆ.

ನಂಜನಗೂಡು ಅರಣ್ಯ ಭಾಗ ದಿಂದ ಕರಡಿಯು ಹಿರಿಕಾಟಿಯ ಮಹೇಂದ್ರ ಅವರ ತೋಟಕ್ಕೆ ಗುರುವಾರ ಬಂದಿದೆ. ಮಧ್ಯಾಹ್ನ 12ರ ಸುಮಾರಿಗೆ ಇದನ್ನು ಗಮನಿಸಿದ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಇಲಾಖೆಯ ಸಿಬ್ಬಂದಿ ಕರಡಿಯನ್ನು ಸೆರೆ ಹಿಡಿಯಲು ಪ್ರಯತ್ನಿಸಿದರು. ಈ ವೇಳೆ ಎದುರಿಗೆ ಬಂದ ನಾಗಯ್ಯ ಅವರಿಗೆ ಮೇಲೆರಗಿ ಪರಚಿದೆ. ನಂತರ, ಜಮೀನಿನಲ್ಲಿರುವ ಪೊದೆಯೊಳಗೆ ಓಡಿಹೋದ ಕರಡಿ, ಸ್ವಲ್ಪ ಸಮಯದ ನಂತರ ನಂಜನಗೂಡು ಅರಣ್ಯ ಪ್ರದೇಶದ ಕಡೆಗೆ ಹೋಗಿದೆ. ಸಂಜೆಯಾಗಿದ್ದರಿಂದ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ನಿಲ್ಲಿಸಿದರು.

ಶುಕ್ರವಾರ ಕರಡಿ ಕಾಣಿಸಿ ಕೊಂಡರೆ ಕಾರ್ಯಾಚರಣೆ ಮುಂದುವರೆಸುವುದಾಗಿ ವಲಯಾರಣ್ಯಾಧಿಕಾರಿ ಲೋಕೇಶ್ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.