ADVERTISEMENT

ಮರಿಯಾಲ ಶ್ರೀಗಳ ಜನ್ಮದಿನ: ರಕ್ತದಾನ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2023, 14:30 IST
Last Updated 22 ಅಕ್ಟೋಬರ್ 2023, 14:30 IST
ಮರಿಯಾಲ ಮಠದಲ್ಲಿ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿಯವರ ಜನ್ಮದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರದಲ್ಲಿ ಸ್ವತಃ ಶ್ರೀಗಳು ಹಾಗೂ ಚಾಮರಾಜನಗರ ಚನ್ನಬಸವಸ್ವಾಮೀಜಿಯವರು ರಕ್ತದಾನ ಮಾಡಿದರು. ಡಾ.ಬಸವರಾಜೇಂದ್ರ, ಶ್ವೇತ ಶಶಿಧರ್‌ ಇತರರು ಇದ್ದರು
ಮರಿಯಾಲ ಮಠದಲ್ಲಿ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿಯವರ ಜನ್ಮದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರದಲ್ಲಿ ಸ್ವತಃ ಶ್ರೀಗಳು ಹಾಗೂ ಚಾಮರಾಜನಗರ ಚನ್ನಬಸವಸ್ವಾಮೀಜಿಯವರು ರಕ್ತದಾನ ಮಾಡಿದರು. ಡಾ.ಬಸವರಾಜೇಂದ್ರ, ಶ್ವೇತ ಶಶಿಧರ್‌ ಇತರರು ಇದ್ದರು   

ಚಾಮರಾಜನಗರ: ಸಮೀಪದ ಮರಿಯಾಲದ ಮುರುಘ ರಾಜೇಂದ್ರಸ್ವಾಮಿ ಮಠದ ಇಮ್ಮಡಿ ಮುರುಘ ರಾಜೇಂದ್ರಸ್ವಾಮೀಜಿಯವರ ಜನ್ಮದಿನದ ಅಂಗವಾಗಿ ಭಾನುವಾರ ವಿವಿಧ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳು ನಡೆದವು.

ಬೆಳಿಗ್ಗೆ 6 ಗಂಟೆಗೆ ಮಠದ ಗುರುಪರಂಪರೆಯ ಗದ್ದುಗೆಗೆ ಪೂಜೆ ಸಲ್ಲಿಸಲಾಯಿತು.

ಜನ್ಮದಿನದ ಅಂಗವಾಗಿ ಮುರುಘರಾಜೇಂದ್ರಸ್ವಾಮಿ ವಿದ್ಯಾಸಂಸ್ಥೆ, ಬಸವರಾಜೇಂದ್ರ ಆಸ್ಪತ್ರೆ ಹಾಗೂ ಬಸವರಾಜೇಂದ್ರ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ರಕ್ತದಾನ ಹಾಗೂ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು. 

ADVERTISEMENT

ಇಮ್ಮಡಿ ಮುರುಘ ರಾಜೇಂದ್ರಸ್ವಾಮೀಜಿ ಮತ್ತು ಚಾಮರಾಜನಗರ ವಿರಕ್ತ ಮಠ ಚನ್ನಬಸವಸ್ವಾಮೀಜಿಯವರು ರಕ್ತದಾನ ಮಾಡುವುದರ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.

ಜಿ.ಕುಮಾರಸ್ವಾಮೀಜಿ, ಬಸವರಾಜೇಂದ್ರ ಆಸ್ಪತ್ರೆಯ  ಡಾ.ಬಸವ ರಾಜೇಂದ್ರ, ಡಾ. ಶ್ವೇತಾ ಶಶಿಧರ್‌, ಆಸ್ಪತ್ರೆಯ ಸಿಬ್ಬಂದಿ ವರ್ಗದವರು, ಮುರುಘರಾಜೇಂದ್ರಸ್ವಾಮಿ ವಿದಾಸಂಸ್ಥೆ ನೌಕರ ವರ್ಗದವರು ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.