ಗುಂಡ್ಲುಪೇಟೆ:ತಾಲೂಕಿನ ಬಂಡೀಪುರ ಅರಣ್ಯದ ಅಂಚಿನ ಕಲೀಗೌಡನಹಳ್ಳಿಯ ಜಮೀನಿನಲ್ಲಿ ಆರ್ಎಫ್ಒ ರಾಘವೇಂದ್ರ ಅಗಸಿ ಅವರ ಮೇಲೆ ಹುಲಿ ದಾಳಿ ನಡೆಸಿ ಘಾಸಿಗೊಳಿಸಿದೆ.
ಸೋಮವಾರ ಗ್ರಾಮದ ಶ್ರೀನಿವಾಸ ಎಂಬುವರ ಜಮೀನಿನಲ್ಲಿ ಹುಲಿ ಕಾಣಿಸಿಕೊಂಡಿದೆ ಎಂಬ ಗ್ರಾಮಸ್ಥರ ಮಾಹಿತಿ ಆಧರಿಸಿ ಬಂಡೀಫುರ ಹುಲಿ ಸಂರಕ್ಷಿತಾರಣ್ಯದ ಗೋಪಾಲಸ್ವಾಮಿ ಬೆಟ್ಟ ವಲಯದ ಆರ್ಎಫ್ಒ ರಾಘವೇಂದ್ರ ಅವರು ಸಿಬ್ಬಂದಿ ಜತೆ ತೆರಳಿದ್ದರು.
ಜಮೀನಿನಲ್ಲಿ ಹುಲಿಗಾಗಿ ಹುಡುಕಾಡುವಾಗ ಆರ್ ಎಫ್ ಒ ಮೇಲೆ ದಿಢೀರನೆ ಹುಲಿ ದಾಳಿ ಮಾಡಿದ್ದರಿಂದ ಗಾಯಗೊಂಡಿದ್ದಾರೆ.
ತಕ್ಷಣ ಅವರನ್ನು ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.