ADVERTISEMENT

ಚಾಮರಾಜನಗರ: ಟಿಪ್ಪರ್‌ ಡಿಕ್ಕಿ– ಇಬ್ಬರು ಯುವಕರ ದಾರುಣ ಸಾವು

​ಪ್ರಜಾವಾಣಿ ವಾರ್ತೆ
Published 9 ಜನವರಿ 2021, 14:15 IST
Last Updated 9 ಜನವರಿ 2021, 14:15 IST
ಯುವಕರು ಸಂಚರಿಸುತ್ತಿದ್ದ ಬೈಕ್‌
ಯುವಕರು ಸಂಚರಿಸುತ್ತಿದ್ದ ಬೈಕ್‌   

ಚಾಮರಾಜನಗರ: ನಗರದ ಸತ್ಯಮಂಗಲ ರಸ್ತೆಯ ಸಿದ್ಧಾರ್ಥ ಚಿತ್ರಮಂದಿರದ ಬಳಿ ಶನಿವಾರ ಹಿಂಬದಿಯಿಂದ ಟಿಪ್ಪರ್‌ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿ ಹೋಗುತ್ತಿದ್ದ ಯುವಕರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಧ್ಯಾಹ್ನ 3.30ರ ಸುಮಾರಿಗೆ ಅಪಘಾತ ಸಂಭವಿಸಿದೆ. ತಾಲ್ಲೂಕಿನ ಬ್ಯಾಡಮೂಡ್ಲು ಗ್ರಾಮದ ಮಣಿಕಂಠ (24) ಹಾಗೂ ಹೊಂಗನೂರು ಗ್ರಾಮದ ನಾಕಶೆಟ್ಟಿ ಎಂಬುವವರ ಮಗ ನಟರಾಜು (24) ಮೃತಪಟ್ಟವರು.

ಮಣಿಕಂಠ ಹಾಗೂ ನಟರಾಜ ಅವರು ಸ್ನೇಹಿತರಾಗಿದ್ದು, ಪಲ್ಸರ್‌ ಬೈಕ್‌ನಲ್ಲಿ ಚಾಮರಾಜನಗರದಿಂದ ಸೋಮವಾರಪೇಟೆಯ ಕಡೆಗೆ ಹೋಗುತ್ತಿದ್ದರು. ಈ ವೇಳೆ ಟಿಪ್ಪರ್‌ ಒಂದು ಹಿಂಬದಿಯಿಂದ ಡಿಕ್ಕಿ ಹೊಡೆದು, ಯುವಕರ ಮೇಲೆ ಹರಿದಿದೆ. ಇಬ್ಬರ ಮುಖ ಕೂಡ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ADVERTISEMENT

ಯುವಕರು ಬೈಕ್‌ನಲ್ಲಿ ಊಟದ ಪಾರ್ಸೆಲ್‌ ತೆಗೆದುಕೊಂಡು ಹೋಗುತ್ತಿದ್ದರು. ಅಪಘಾತದ ಬಳಿಕ ಇಬ್ಬರ ಮೃತದೇಹ ರಕ್ತದ ಮಡುವಿನಲ್ಲಿ ಬಿದ್ದಿದ್ದರೆ, ಊಟ ಚೆಲ್ಲಾಪಿಲ್ಲಿಯಾಗಿತ್ತು.

ಚಾಲಕ ಟಿಪ್ಪರ್‌ ಅನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಪತ್ತೆಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.