ADVERTISEMENT

ಬಂಡೀಪುರ: ಚಿರತೆ ಸಾವು

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2020, 8:33 IST
Last Updated 6 ಡಿಸೆಂಬರ್ 2020, 8:33 IST
ಮೃತಪಟ್ಟ ಚಿರತೆ
ಮೃತಪಟ್ಟ ಚಿರತೆ   

ಗುಂಡ್ಲುಪೇಟೆ: ಬಂಡೀಪುರದ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆ ವಲಯ ವ್ಯಾಪ್ತಿಯ ಯರಿಯೂರು ಗ್ರಾಮದ ಸೆಕ್ಷನ್ 4ರ ಪ್ರದೇಶದಲ್ಲಿ ಶನಿವಾರ ಗಂಡು ಚಿರತೆ ಮೃತಪಟ್ಟಿರುವುದು ಬೀಟ್ ಸಿಬ್ಬಂದಿ ಗಮನಕ್ಕೆ ಬಂದಿದೆ.

ಚಿರತೆಗೆ 6 ರಿಂದ 8 ವರ್ಷ ಇರಬಹುದು. ಅದು ಸಹಜವಾಗಿ ಮೃತಪಟ್ಟಿದೆ. ವೈದ್ಯರು ಪರಿಶೀಲನೆ ನಡೆಸಿದ್ದು, ದೇಹದಲ್ಲಿ ಗಾಯಗಳು ಕಂಡು ಬಂದಿಲ್ಲ ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT