ಯಳಂದೂರು: ತಾಲ್ಲೂಕಿನ ಹೊನ್ನೂರುಬೀಚಹಳ್ಳಿ ಗ್ರಾಮದಲ್ಲಿ ಪ್ರೀತಿಸಿದ ಹುಡುಗ ವಿವಾಹಕ್ಕೆ ಒಪ್ಪದ ಕಾರಣ ಯುವತಿ ಗುರುವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದುಂಡಶೆಟ್ಟಿ ಅವರ ಪುತ್ರಿ ನಂದಿನಿ (19) ಮೃತ ಯುವತಿ. ಎಂ.ಯೋಗೇಶ್ ಮತ್ತು ನಂದಿನಿ ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಅವರ ನಿಶ್ಚಿತಾರ್ಥವನ್ನೂ ಪೋಷಕರು ನೆರ ವೇರಿಸಿದ್ದರು. ಮದುವೆ ವಯಸ್ಸು ಆಗದೆ ಇದ್ದುದರಿಂದ ವಿವಾಹ ಮುಂದೂಡಲಾಗಿತ್ತು.
ಯುವತಿಗೆ 18 ವರ್ಷ ತುಂಬಿದ ನಂತರ ಮದುವೆ ಪ್ರಸ್ತಾಪ ಮಾಡಿದಾಗ ಯೋಗೇಶ್ ಒಪ್ಪಿರಲಿಲ್ಲ. ಮತ್ತೊಬ್ಬರ ಜೊತೆ ವಿವಾಹ ಆಗುವುದಾಗಿ ತಿಳಿಸಿದ್ದ.
‘ಮದುವೆ ಇಷ್ಟ ಇಲ್ಲವೆಂದು ಯಜಮಾನರ ಸಮ್ಮುಖದಲ್ಲಿ ಹೇಳುವಂತೆ ಒತ್ತಾಯಿ ಸಿದ್ದ. ಇದರಿಂದ ಬೇಸತ್ತ ಯುವತಿ ಮನೆ ಯಲ್ಲಿ ಯಾರು ಇಲ್ಲದ ಸಮಯದಲ್ಲಿ ಆತ್ಮ ಹತ್ಯೆ ಮಾಡಿ ಕೊಂಡಿದ್ದಾಳೆ ಎಂದು ಪೋಷಕರು ಪಟ್ಟಣ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಯನ್ನು ಬಂಧಿಸಿ ರುವ ಪೊಲೀಸರು ನ್ಯಾಯಾಂಗ ಬಂಧ ನಕ್ಕೆ ಒಪ್ಪಿಸಿದ್ದಾರೆ’ ಎಂದು ಪಿಎಸ್ಐ ಕರಿಬಸಪ್ಪ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.