ADVERTISEMENT

ಕಾವೇರಿ ನದಿ ದಾಟಿ ಅರಣ್ಯ ಪ್ರವೇಶ: ತಮಿಳುನಾಡಿನ ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 20:00 IST
Last Updated 1 ಡಿಸೆಂಬರ್ 2019, 20:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಹನೂರು (ಚಾಮರಾಜನಗರ ಜಿಲ್ಲೆ): ಕಾವೇರಿ ನದಿ ದಾಟಿ ಅಕ್ರಮವಾಗಿ ಅರಣ್ಯ ಪ್ರವೇಶಿಸಿದ್ದ ತಮಿಳುನಾಡಿನ ನಾಲ್ವರನ್ನು ಅರಣ್ಯಾಧಿಕಾರಿಗಳು ಶನಿವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ತಮಿಳುನಾಡಿನ ಯಮನೂರು ಗ್ರಾಮದ ಅಣ್ಣಾಮಲೈ, ಅಶೋಕ, ಅಣ್ಣಾದೊರೈ ಹಾಗೂ ಪೆರುಮಾಳ್ ಬಂಧಿತರು.

ಕಾವೇರಿ ವನ್ಯಧಾಮದ ಗೋಪಿನಾಥಂ ವನ್ಯಜೀವಿ ವಲಯದಲ್ಲಿ ಶನಿವಾರ ನದಿ ದಾಟಿ ಅರಣ್ಯ ಪ್ರವೇಶಿಸಿದ್ದಾರೆ. ಗಸ್ತಿನಲ್ಲಿದ್ದ ಸಿಬ್ಬಂದಿ ಹಿಡಿದು ವಿಚಾರಣೆ ನಡೆಸಿದಾಗ ಅವರ ಬಳಿ ಹಾರೆ, ಗುದ್ದಲಿ ಹಾಗೂ ಚೀಲಗಳಿರುವುದು ಪತ್ತೆಯಾಗಿದೆ. ಗೆಡ್ಡೆಗೆಣಸು ತೆಗೆಯಲು ಬಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.

ADVERTISEMENT

ಕಾವೇರಿ ವನ್ಯಧಾಮದ ಕೌದಳ್ಳಿ ವನ್ಯಜೀವಿ ವಲಯದಲ್ಲಿ ತಮಿಳುನಾಡಿನ ಎಂಟು ಜನರು ಕಾವೇರಿ ನದಿ ದಾಟಿ ಅರಣ್ಯದಲ್ಲಿ ವಾಸ್ತವ್ಯ ಹೂಡಿ ಮಾಕಳಿ ಬೇರು ಸಂಗ್ರಹಣೆಯಲ್ಲಿ ತೊಡಗಿದ್ದರು. ಇವರನ್ನು ಬಂಧಿಸಿದಾಗ ಇಬ್ಬರು ಮಹಿಳೆಯರಿದ್ದರು. ಈಗ ಇದೇ ವನ್ಯಧಾಮದಲ್ಲಿ ಮತ್ತೆ ನುಸುಳುಕೋರರು ಕಾಣತೊಡಗಿದ್ದಾರೆ.

ಈ ಹಿಂದೆಯೂ ಗೋಪಿನಾಥಂ, ಕೌದಳ್ಳಿ ವನ್ಯಜೀವಿ ವಲಯಗಳಲ್ಲಿ ನದಿ ದಾಟಿ ಬಂದು ಬೇಟೆಯಾಡುತ್ತಿರುವುದು ಸಾಮಾನ್ಯವಾಗಿತ್ತು. ಕಳೆದ ಮೂರು ವರ್ಷಗಳಿಂದೀಚೆಗೆ ಇದು ಕಡಿಮೆಯಾಗಿತ್ತು. ಈಗ ಮತ್ತೆ ಇಂಥ ಪ್ರಕರಣಗಳು ಮರುಕಳಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.