ADVERTISEMENT

ಕೊಳ್ಳೇಗಾಲ: ಗುಂಡಾಲ್ ಜಲಾಶಯಕ್ಕೆ ಬಾಗಿನ ಅರ್ಪಿಸಿದ ನರೇಂದ್ರ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2025, 15:07 IST
Last Updated 6 ಫೆಬ್ರುವರಿ 2025, 15:07 IST
ಕೊಳ್ಳೇಗಾಲ ತಾಲ್ಲೂಕಿನ ಗುಂಡಾಲ್ ಜಲಾಶಯಕ್ಕೆ ಮಾಜಿ ಶಾಸಕ ಆರ್.ನರೇಂದ್ರ ಅವರು ನೂರಾರು ರೈತರ ಸಮ್ಮುಖದಲ್ಲಿ ಗುರುವಾರ ಬಾಗಿನ ಅರ್ಪಿಸಿದರು.
ಕೊಳ್ಳೇಗಾಲ ತಾಲ್ಲೂಕಿನ ಗುಂಡಾಲ್ ಜಲಾಶಯಕ್ಕೆ ಮಾಜಿ ಶಾಸಕ ಆರ್.ನರೇಂದ್ರ ಅವರು ನೂರಾರು ರೈತರ ಸಮ್ಮುಖದಲ್ಲಿ ಗುರುವಾರ ಬಾಗಿನ ಅರ್ಪಿಸಿದರು.   

ಕೊಳ್ಳೇಗಾಲ: ತಾಲ್ಲೂಕಿನ ಗುಂಡಾಲ್ ಜಲಾಶಯಕ್ಕೆ ಮಾಜಿ ಶಾಸಕ ಆರ್. ನರೇಂದ್ರ ಗುರುವಾರ ಜಲಾಶಯಕ್ಕೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು.

' ಹನೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನೀರಾವರಿ ಅಭಿವೃದ್ಧಿಗೆ ₹1,440 ಕೋಟಿ ವೆಚ್ಚದ ವಿವಿಧ ಯೋಜನೆಗಳ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇನೆ. ಮಲೆಮಹದೇಶ್ವರ ಬೆಟ್ಟದಲ್ಲಿ ಫೆಬ್ರುವರಿ 17ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತರೆ ಕ್ಷೇತ್ರದಲ್ಲಿ 40 ಸಾವಿರ ಎಕರೆಗೆ ಕೃಷಿ ಭೂಮಿಗೆ ನೀರು ನೀಡಬಹುದು.  ಹಿಂದಿನಿಂದಲೂ ಅದಕ್ಕಾಗಿ ಹೋರಾಟ ಮಾಡಿದ್ದೇನೆ. ಹೀಗಾಗಿ  ಸಿದ್ದರಾಮಯ್ಯ ಆಡಳಿತದ ಹಿಂದಿನ ಸರ್ಕಾರದಲ್ಲಿ ₹127 ಕೋಟಿ ಅನುದಾನದಲ್ಲಿ ಗುಂಡಾಲ್, ಹುಬ್ಬೆಹುಣಸೆ, ರಾಮನಗುಡ್ಡ ಜಲಾಶಯಕ್ಕೆ ನೀರು ತುಂಬಿಸುವ ಯೋಜನೆ, ₹128 ಕೋಟಿ ಅನುದಾನದಲ್ಲಿ  ಹನೂರಿನ 100 ಹಳ್ಳಿಗಳಿಗೆ ನೀರು ಸರಬರಾಜು ಯೋಜನೆ ಮೊದಲ ಹಂತ ಕ್ಷೇತ್ರಕ್ಕೆ ದೊರೆಯಿತು ಎಂದರು.

  ಬಿಜೆಪಿ ಸರ್ಕಾರದ ಅವಧಿಯಲ್ಲಿ ಚಾಲನೆ ನೀಡಲು ರಾಮಗುಡ್ಡ ಬಳಿ ಸಿದ್ಧತೆ ನಡೆಸಿದ್ದೆ. ಆದರೆ, ಅಂದಿನ ಸಚಿವ ಈಶ್ವರಪ್ಪ, ಸುರೇಶ್ ಕುಮಾರ್ ಬರಲಿಲ್ಲ.  ನರೇಂದ್ರಗೆ ಹೆಸರು ಬರುತ್ತದೆ ಎಂದು ಅವರಿಬ್ಬರು ಬಂದಿಲ್ಲ ಎಂದು ತಿಳಿಯಿತು.  ನಾನೊಬ್ಬನೇ ಪೂಜೆ ಕಾರ್ಯ ನೆರವೇರಿಸಿದೆ. ಇಂದು ಬೇಸಿಗೆಯಲ್ಲೂ ಮೂರೂ ಜಲಾಶಯಗಳಲ್ಲಿ ನೀರು ಸಿಗುತ್ತದೆ. ಈ ಕೆಲಸಕ್ಕೆ ಕೃತಜ್ಞತೆ ಸಲ್ಲಿಸಲು ಹನೂರು ಮುಖಂಡರು ಬಾಗಿನ ಅರ್ಪಣೆ ಕಾರ್ಯಕ್ರಮವನ್ನು ನನ್ನನ್ನು ಆಹ್ವಾನಿಸಿದ್ದಾರೆ ಎಂದರು.


 ಮುಖಂಡ ಕುಮಾರ್ ಗೌಡ ಕಾಮಗೆರೆ, ಮಾದೇಶ್ ಕಂಡನಪಾಳ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್, ರಾಜು ಇದ್ವಾಂಡಿ, ಗಿರಿ, ಗೋವಿದ್, ಪ್ರದೀಪ್, ಸಿದ್ದರಾಜು, ಚೇತನ್ ದೊರೈರಾಜ್ ಇದ್ದರು.

‘ನೀರಾವರಿ ರಸ್ತೆ ಅಭಿವೃದ್ಧಿಗೆ ಪ್ರಸ್ತಾವ’
ಕ್ಷೇತ್ರದಲ್ಲಿ ಗುಂಡಾಲ್ ಹುಬ್ಬೆ ಹುಣಸೆ ರಾಮನಗುಡ್ಡ ಹೂಗ್ಯಂ ಡ್ಯಾಂ ಉಡುತರೆ ಕಿರೆಪಾತೆ ಕೌಳಿಕಟ್ಟೆ ಡ್ಯಾಂ ಗೋಪಿನಾಥಂ ಡ್ಯಾಂ ಸೇರಿದಂತೆ ಒಟ್ಟು 8 ಅಣೆಕಟ್ಟೆಗಳಿದೆ. ಇವೆಲ್ಲದಕ್ಕೂ ನೀರು ತುಂಬಿಸುವ  ಸಂದರ್ಭ ಒದಗಿದೆ. ಮುಚ್ಚಿ ಹೋಗಿರುವ ತೋಡು ಕಾಲುವೆ ಮುಖ್ಯ ಕಾಲುವೆ ದುರಸ್ತಿ ಪೈಪ್‍ಲೈನ್‍ಗಳು ಜತೆಗೆ ಸತ್ತೇಗಾಲದಿಂದ ಮಾರ್ಟಳ್ಳಿ ಕಿರೆಪಾತೆ ವರೆಗಿನ 20ಕೆರೆಗಳಿಗೆ ನೀರು ತುಂಬಿಸುವುದು. ₹200 ಕೋಟಿ ವೆಚ್ಚದಲ್ಲಿ ಉಡುತೊರೆ ಹಳ್ಳಕ್ಕೆ ನೀರು ತುಂಬಿಸುವ ಯೋಜನೆ ₹12 ಕೋಟಿ ಅನುದಾನದಲ್ಲಿ ಹೂಗ್ಯಂ ಡ್ಯಾಂ ಅಭಿವೃದ್ಧಿ ಪಾರ್ಕ್ ನಿರ್ಮಾಣ ಹಾಗೂ ಚೆಕ್ ಡ್ಯಾಂ ನಿರ್ಮಾಣ ಅಭಿವೃದ್ಧಿಗೆ ಒಟ್ಟು ₹1440 ಕೋಟಿ ವೆಚ್ಚದ ಪ್ರಸ್ತಾವ ಸಲ್ಲಿಸಿದ್ದೇನೆ.  ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುವ  ಸಂಪುಟ ಸಭೆಯಲ್ಲಿ ಹಣ ಬಿಡುಗಡೆಯಾದರೆ ₹40 ಸಾವಿರ ಎಕರೆ ಕೃಷಿ ಪ್ರದೇಶಕ್ಕೆ ಸಮೃದ್ಧವಾಗಿ ನೀರು ಸಿಗುತ್ತದೆ ಎಂದರು.  ಗುಂಡಾಲ್ ರಸ್ತೆ ಮತ್ತೀಪುರ -ಕೊತ್ತನೂರು ರಸ್ತೆ ಲೊಕ್ಕನಹಳ್ಳಿ ರಸ್ತೆ ಅಭಿವೃದ್ಧಿಗೆ ₹80 ಕೋಟಿ ಅನುದಾನ ಬಿಡುಗಡೆಯಾಗಿದೆ ಫೆ.9 ರಂದು ಸಂಸದ ಸುನೀಲ್ ಬೋಸ್ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು. ₹200 ಕೋಟಿ ವೆಚ್ಚದಲ್ಲಿ ಹನೂರು-ಮಹದೇಶ್ವರ ಬೆಟ್ಟದ ಕೆಶಿಪ್ ರಸ್ತೆಗೆ ಪ್ರಸ್ತಾವ ಹನೂರಿನಲ್ಲಿ ಬಸ್ ಡಿಪೋ ನಿರ್ಮಾಣ ತಾಲ್ಲೂಕು ಆಸ್ಪತ್ರೆ ನಿರ್ಮಾಣ ಬೆಟ್ಟದಲ್ಲಿ ಅಗ್ನಿ ಶಾಮಕ ಠಾಣೆ ಮುಂತಾದವುಗಳ ಬಗ್ಗೆ ಚರ್ಚೆಯಾಗಲಿದೆ. ಕ್ಷೇತ್ರದ 32 ಹಾಡಿಗಳ ಪೈಕಿ 12 ಹಾಡಿಗಳಿಗೆ ಬೆಳಕಿರಲಿಲ್ಲ ಇದೀಗ ಈ ಕೆಲಸ ಆಗುತ್ತಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.