ಕೊಳ್ಳೇಗಾಲ: ತಾಲ್ಲೂಕಿನ ಗುಂಡಾಲ್ ಜಲಾಶಯಕ್ಕೆ ಮಾಜಿ ಶಾಸಕ ಆರ್. ನರೇಂದ್ರ ಗುರುವಾರ ಜಲಾಶಯಕ್ಕೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು.
' ಹನೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನೀರಾವರಿ ಅಭಿವೃದ್ಧಿಗೆ ₹1,440 ಕೋಟಿ ವೆಚ್ಚದ ವಿವಿಧ ಯೋಜನೆಗಳ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇನೆ. ಮಲೆಮಹದೇಶ್ವರ ಬೆಟ್ಟದಲ್ಲಿ ಫೆಬ್ರುವರಿ 17ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತರೆ ಕ್ಷೇತ್ರದಲ್ಲಿ 40 ಸಾವಿರ ಎಕರೆಗೆ ಕೃಷಿ ಭೂಮಿಗೆ ನೀರು ನೀಡಬಹುದು. ಹಿಂದಿನಿಂದಲೂ ಅದಕ್ಕಾಗಿ ಹೋರಾಟ ಮಾಡಿದ್ದೇನೆ. ಹೀಗಾಗಿ ಸಿದ್ದರಾಮಯ್ಯ ಆಡಳಿತದ ಹಿಂದಿನ ಸರ್ಕಾರದಲ್ಲಿ ₹127 ಕೋಟಿ ಅನುದಾನದಲ್ಲಿ ಗುಂಡಾಲ್, ಹುಬ್ಬೆಹುಣಸೆ, ರಾಮನಗುಡ್ಡ ಜಲಾಶಯಕ್ಕೆ ನೀರು ತುಂಬಿಸುವ ಯೋಜನೆ, ₹128 ಕೋಟಿ ಅನುದಾನದಲ್ಲಿ ಹನೂರಿನ 100 ಹಳ್ಳಿಗಳಿಗೆ ನೀರು ಸರಬರಾಜು ಯೋಜನೆ ಮೊದಲ ಹಂತ ಕ್ಷೇತ್ರಕ್ಕೆ ದೊರೆಯಿತು ಎಂದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಚಾಲನೆ ನೀಡಲು ರಾಮಗುಡ್ಡ ಬಳಿ ಸಿದ್ಧತೆ ನಡೆಸಿದ್ದೆ. ಆದರೆ, ಅಂದಿನ ಸಚಿವ ಈಶ್ವರಪ್ಪ, ಸುರೇಶ್ ಕುಮಾರ್ ಬರಲಿಲ್ಲ. ನರೇಂದ್ರಗೆ ಹೆಸರು ಬರುತ್ತದೆ ಎಂದು ಅವರಿಬ್ಬರು ಬಂದಿಲ್ಲ ಎಂದು ತಿಳಿಯಿತು. ನಾನೊಬ್ಬನೇ ಪೂಜೆ ಕಾರ್ಯ ನೆರವೇರಿಸಿದೆ. ಇಂದು ಬೇಸಿಗೆಯಲ್ಲೂ ಮೂರೂ ಜಲಾಶಯಗಳಲ್ಲಿ ನೀರು ಸಿಗುತ್ತದೆ. ಈ ಕೆಲಸಕ್ಕೆ ಕೃತಜ್ಞತೆ ಸಲ್ಲಿಸಲು ಹನೂರು ಮುಖಂಡರು ಬಾಗಿನ ಅರ್ಪಣೆ ಕಾರ್ಯಕ್ರಮವನ್ನು ನನ್ನನ್ನು ಆಹ್ವಾನಿಸಿದ್ದಾರೆ ಎಂದರು.
ಮುಖಂಡ ಕುಮಾರ್ ಗೌಡ ಕಾಮಗೆರೆ, ಮಾದೇಶ್ ಕಂಡನಪಾಳ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್, ರಾಜು ಇದ್ವಾಂಡಿ, ಗಿರಿ, ಗೋವಿದ್, ಪ್ರದೀಪ್, ಸಿದ್ದರಾಜು, ಚೇತನ್ ದೊರೈರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.