ADVERTISEMENT

ಕಾಂಗ್ರೆಸ್ ಕಚೇರಿಯಲ್ಲಿ ನೆಹರು ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2020, 15:18 IST
Last Updated 14 ನವೆಂಬರ್ 2020, 15:18 IST
ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ ನೆಹರು ಜಯಂತಿಯನ್ನು ಆಚರಿಸಲಾಯಿತು
ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ ನೆಹರು ಜಯಂತಿಯನ್ನು ಆಚರಿಸಲಾಯಿತು   

ಚಾಮರಾಜನಗರ: ಮಾಜಿ ಪ್ರಧಾನಿ ಜವಾಹಲ್ ಲಾಲ್‌ ನೆಹರು ಅವರ ಜಯಂತಿಯನ್ನು ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ ಶನಿವಾರ ಆಚರಿಸಲಾಯಿತು.

ನೆಹರು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು, ‘ನೆಹರು ಅವರು ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ.ಬಡತನ ನಿರ್ಮೂಲನೆ, ದೇಶದ ಭದ್ರತೆಗಾಗಿ ಅವರು ಕೈಗೊಂಡ ನಿರ್ಣಯಗಳು ಅಭಿವೃದ್ದಿಗೆ ಪೂರಕವಾಗಿತ್ತು’ ಎಂದರು.

‘ಸ್ವಾತಂತ್ರ್ಯ ಹೋರಾಟರಾಗಿದ್ದ ನೆಹರು ಹಾಗೂ ಮಹಾತ್ಮ ಗಾಂಧೀಜಿ ಅವರೊಂದಿಗೆ ಸಕ್ರಿಯವಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದರು. ಬ್ರಿಟಿಷರ ದಾಸ್ಯದಿಂದ ದೇಶವನ್ನು ಬಿಡುಗಡೆಗೊಳಿಸಿದ ಬಳಿಕ ಸ್ವಾತಂತ್ರ್ಯ ನಂತರ ಪ್ರಥಮ ಪ್ರಧಾನಿಯಾಗಿ ನೆಹರು ಅವರು ಆಯ್ಕೆಯಾಗಿ, ದೇಶವನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿದರು’ ಎಂದರು.

ADVERTISEMENT

‘ಬ್ರಿಟಿಷರು ನೂರಾರು ವರ್ಷಗಳ ಕಾಲ ಭಾರತದ ಆಳ್ವಿಕೆ ಮಾಡಿ, ಸಂಪತ್ತು ದೋಚಿ ಹೋಗಿದ್ದರು. ಇಂಥ ಸಂಕಷ್ಟದ ಸಮಯದಲ್ಲಿ ಬಡತನದಿಂದ ಕೂಡಿದ್ದ ದೇಶವನ್ನು ಮುನ್ನಡೆಯುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದವರು ನೆಹರು. ಬಡತನ ನಿರ್ಮೂಲನೆ ಹಾಗೂ ದೇಶದ ಅಖಂಡತೆ, ಭದ್ರತೆಗಾಗಿ ಅವರು ಜಾರಿ ಮಾಡಿದ, ಪಂಚ ವಾರ್ಷಿಕ ಯೋಜನೆ, ವಿದೇಶಾಂಗ ನೀತಿಗಳು ಭಾರತವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ದಿತು’ ಎಂದು ಎಂದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ಅವರು ಮಾತನಾಡಿದರು. ‘ನೆಹರು ಅವರಿಗೆ ಮಕ್ಕಳು ಎಂದರೆ ಪ್ರೀತಿ. ಹಾಗಾಗಿ, ಅವರ ಜನ್ಮ ದಿನವಾದ ನವೆಂಬರ್‌ 14 ಅನ್ನು ಮಕ್ಕಳ ದಿನಾಚರಣೆಯನ್ನಾಗಿ ರಾಷ್ಟ್ರದಾದ್ಯಂತ ಆಚರಣೆ ಮಾಡಲಾಗುತ್ತದೆ’ ಎಂದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್ ಮಾತನಾಡಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವ್, ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಬ್ಲಾಕ್ ಅಧ್ಯಕ್ಷರಾದ ಮಹಮದ್ ಅಸ್ಗರ್, ಎ.ಎಸ್.ಗುರುಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯ ಕೆರೆಹಳ್ಳಿ ನವೀನ್, ಮುಖಂಡರಾದ ಸುಹೇಲ್ ಆಲಿ ಖಾನ್, ಆಯುಬ್ ಖಾನ್, ನಾಗವಳ್ಳಿ ನಾಗಯ್ಯ,ಎಸ್.ರಾಜು, ಕಾಗಲವಾಡಿ ಚಂದ್ರು, ಶೇಖರಪ್ಪ, ಕಾನೂನು ವಿಭಾಘದ ಅಧ್ಯಕ್ಷ ನಾಗಾರ್ಜುನ್ ಪೃಥ್ವಿ, ಡಾ.ರಂಗಸ್ವಾಮಿ, ವೀರಭದ್ರಸ್ವಾಮಿ, ಸೋಮೇಶ್ವರ್, ಅಮಚವಾಡಿ ಕಾಂತರಾಜು, ವಡ್ಗಲ್‌ಪುರ ದೊರೆಸ್ವಾಮಿ, ಉತ್ತುವಳ್ಳಿ ರಾಮು, ರೇಣುಕಾ ಮಲ್ಲಿಕಾರ್ಜುನ್, ವೈ.ಪಿ.ರಾಜೇಂದ್ರ ಪ್ರಸಾದ್ ಮೊದಲಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.