ಹನೂರು (ಚಾಮರಾಜನಗರ ಜಿಲ್ಲೆ): ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆಗೆ, ತಾಲ್ಲೂಕಿನ ಸಿಂಗನಲ್ಲೂರಿನ ಮನೆಯ ಗೋಡೆ ಕುಸಿದು ರಂಗಮ್ಮ(82) ಮೃತಪಟ್ಟರು.
ಮಕ್ಕಳಾದ ಲಕ್ಷ್ಮಮ್ಮ ಹಾಗೂ ರಂಗಯ್ಯ ಅವರು, ಗೋಡೆ ಕುಸಿದ ಶಬ್ದದಿಂದ ಎಚ್ಚರಗೊಂಡು ದಿಢೀರನೆ ಹೊರಗೆ ಬಂದು ಪ್ರಾಣಾಪಾಯದಿಂದ ಪಾರಾದರು.
ಚಾಮರಾಜನಗರದಲ್ಲಿ ಚೆನ್ನಾಪುರದ ಮೊಳೆ ರಸ್ತೆ, ಬಿ.ರಾಚಯ್ಯ ಜೋಡಿ ರಸ್ತೆ, ಕರಿನಂಜನಪುರ ಬಡಾವಣೆಗಳಿಗೆ ನೀರು ನುಗ್ಗಿತ್ತು. ರಸ್ತೆಗಳು ಜಲಾವೃತಗೊಂಡು ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.