ADVERTISEMENT

ಸಮ್ಮೇಳನಗಳ ಉದ್ದೇಶ ಈಡೇರುತ್ತಿಲ್ಲ: ನಂದೀಶ್ ಅಂಚೆ

ಎರಡು ದಿನಗಳ 10ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ತೆರೆ, ಎರಡು ನಿರ್ಣಯಗಳ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 16:08 IST
Last Updated 24 ಜನವರಿ 2020, 16:08 IST
10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು
10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು   

ಹನೂರು: ಗಡಿಭಾಗಗಳಲ್ಲಿ ಹಮ್ಮಿಕೊಳ್ಳುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಚರ್ಚಿಸುವ ಮೂಲಕ ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ನಂದೀಶ್ ಅಂಚೆ ಅವರು ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ನಡೆದ ಎರಡು ದಿನಗಳ 10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಇಂದು ನಡೆಯುತ್ತಿರುವ ಬಹುತೇಕ ಸಮ್ಮೇಳನಗಳ ಮೂಲಉದ್ದೇಶ ಈಡೇರುತ್ತಿಲ್ಲ ಎಂಬುದುನನ್ನ ಭಾವನೆ. ಸಮ್ಮೇಳನಗಳಲ್ಲಿಸ್ಥಳೀಯ ಸಮಸ್ಯೆಗಳಬಗ್ಗೆಗಂಭೀರಚರ್ಚೆಗಳಾಗಬೇಕು.ಹಾಗಾದಾಗ ಮಾತ್ರ ಭಾಷೆ ಉಳಿವಿನ ಜೊತೆಗೆ ಸ್ಥಳೀಯ ಸಮಸ್ಯೆಗಳು ನಿವಾರಣೆಯಾಗಲು ಸಾಧ್ಯ’ ಎಂದರು.

ADVERTISEMENT

‘ಚಲನಚಿತ್ರಗಳಿಗೆ ಸಿಗುತ್ತಿರುವ ಪ್ರಾಮುಖ್ಯ ಇಂದು ರಂಗಭೂಮಿಗೆ ಸಿಗುತ್ತಿಲ್ಲ. ಸಿನಿಮಾಗಳಿಗೆ ಮೂಲವೇ ರಂಗಭೂಮಿ ಎಂಬುದನ್ನು ಪ್ರತಿಯೊಬ್ಬರೂ ಮನಗಾಣಬೇಕಿದೆ’ ಎಂದರು.

‘ಶಿಕ್ಷಣ ಮಕ್ಕಳಿಗೆ ಭಾರವಾಗಿರದೇ ಕಲಿಯುವ ಹುಮ್ಮಸ್ಸನ್ನು ಹೆಚ್ಚಿಸಿದಾಗ ಕಲಿಕೆ ಫಲಪ್ರದವಾಗುತ್ತದೆ. ಅಕ್ಷರದ ಜೊತೆಗೆ ಮಾನವೀಯ ಮೌಲ್ಯಗಳನ್ನು ಕಲಿಸುವ ಕೆಲಸವಾಗಬೇಕಿದೆ. ಪೂರ್ವ ಪ್ರಾಥಮಿಕ ಶಾಲೆಗಳಿಂದ ಇಂದು ಮಕ್ಕಳ ನೈಸರ್ಗಿಕ ಕಲಿಕೆ ಮಾಯವಾಗುತ್ತಿದೆ ಎಂದರು. ಮಕ್ಕಳ ಸಾಹಿತ್ಯ ಇನ್ನಷ್ಟು ರಚನೆಯಾಗಬೇಕಿದೆ’ ಎಂದರು.

ಕೆಪಿಸಿಸಿ ವಕ್ತಾರ ಆರ್. ಧ್ರುವನಾರಾಯಣ ಅವರು ಮಾತನಾಡಿ, ‘ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಹೊತ್ತು ನಿಂತಿದ್ದರೂ ಅಪಾರ ವೈಶಿಷ್ಟ್ಯ ಹೊಂದಿರುವ ಚಾಮರಾಜನಗರವು ರಾಜ್ಯಕ್ಕೆ ಹಾಗೂ ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಗಾಧ. ದೇಶದಲ್ಲಿಯೇ2ಹುಲಿಸಂರಕ್ಷಿತ ಅರಣ್ಯಪ್ರದೇಶ ಹೊಂದಿರುವಹೆಮ್ಮೆ ನಮ್ಮ ಜಿಲ್ಲೆಗಿದೆ. ಅಪಾರವಾದ ನೈಸರ್ಗಿಕ ಸಂಪತ್ತನ್ನುಹೊಂದಿರುವಗಡಿಜಿಲ್ಲೆಯಲ್ಲಿಇಂತಹಸಮ್ಮೇಳಗಳುಮೇಲಿಂದ ಮೇಲೆ ನಡೆಯುತ್ತಿರಬೇಕು’ ಎಂದರು.

‘ಜಿಲ್ಲೆಯ ಜನಪ್ರತಿನಿಧಿಗಳು ಇಂಥ ಸಮ್ಮೇಳನದಲ್ಲಿ ಭಾಗವಹಿಸಿ ಇಲ್ಲಿ ಗಂಭೀರವಾಗಿ ಚರ್ಚಿಸುವ ಸಮಸ್ಯೆಗಳನ್ನು ಪಟ್ಟಿ ಮಾಡಿ ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು.ಜಿಲ್ಲೆಯಲ್ಲಿ ತಾಂಡವವಾಡುತ್ತಿರುವ ಮೂಢನಂಬಿಕೆ ಹೋಗಲಾಡಿಸಬೇಕಿದೆ’ ಎಂದರು.

ಸನ್ಮಾನ: ಸಮಾರಂಭದಲ್ಲಿ ಶೌರ್ಯಚಕ್ರಪ್ರಶಸ್ತಿಪುರಷ್ಕೃತರಾದಯೋಧಪೆರಿಯನಾಯಗಂ, ಚಿತ್ರಕಲಾವಿದಮುಡಿಗುಂಡಮೂರ್ತಿ, ಪತ್ರಕರ್ತ ಎಸ್.ಎಂ.ನಂದೀಶ್, ಯರಿಯೂರುನಾಗೇಂದ್ರ,ಸಮಾಜಸೇವಕ,ಮುತ್ತಣ್ಣ,ಪ್ರದೀಪ್ ಕುಮಾರ್,ಸಿದ್ದರಾಜು,ಮಾದೇವನಾಯಕಸೇರಿದಂತೆ21 ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮಾಜಿಶಾಸಕಿಪರಿಮಳನಾಗಪ್ಪ,ಜಿಲ್ಲಾಪಂಚಾಯಿತಿಸದಸ್ಯರುಗಳಾದಲೇಖಾ,ಮಂಜುಳ,ಕ್ಷೇತ್ರಶಿಕ್ಷಣಾಧಿಕಾರಿಟಿ.ಆರ್ಸ್ವಾಮಿ,ಸಾಹಿತಿ ಸಿ.ಚನ್ನಮಾದೇಗೌಡ,ದತ್ತಿದಾನಿ ಗಣೇಶ್ಪ್ರಸಾದ್,ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಸ್‌.ವಿನಯ್‌, ಉಪಾಧ್ಯಕ್ಷರಾದ ಅಣ್ಣಾದ್ರೇಯ್ಯ,ವೀರಭದ್ರಸ್ವಾಮಿ,ನಾಟಕಭಾರ್ಗವಕೆಂಪರಾಜು,ತಾಲ್ಲೂಕುಅಧ್ಯಕ್ಷರಾದ ಶ್ರೀನಿವಾಸ್ನಾಯ್ಡು, ನಂದೀಶ್, ಮದ್ದೂರುವಿರೂಪಾಕ್ಷ, ಚಿದಾನಂದಸ್ವಾಮಿ ಇದ್ದರು.

ಎರಡು ನಿರ್ಣಯಗಳು

ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಿ.ಎಸ್‌.ವಿನಯ್‌ ಅವರು ಎರಡು ನಿರ್ಣಯಗಳನ್ನು ಮಂಡಿಸಿದರು. ಸಮ್ಮೇಳನವು ಅವುಗಳನ್ನು ಅಂಗೀಕರಿಸಿತು.

1.ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತ ವಿಚಾರದಲ್ಲಿ ಚುನಾಯಿತ ಆಡಳಿತ ವ್ಯವಸ್ಥೆ ಹಸ್ತಕ್ಷೇಪ ಮಾಡದೇ ಸಾಹಿತ್ಯ ಪರಿಷತ್ ಸ್ವತಂತ್ರವಾಗಿ ಆಡಳಿತ ನಡೆಸಲು ಅನುವು ಮಾಡಿಕೊಡಬೇಕು.

2. ತಮಿಳಿನಲ್ಲಿರುವ ಮಲೆಮಹದೇಶ್ವರರನ್ನು ಕುರಿತ ಜಾನಪದ ಸಾಹಿತ್ಯ ಸಂಪಾದನೆಗೊಂಡು ಕನ್ನಡಕ್ಕೆ ಅನುವಾದವಾಗಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.